Advertisement

“ಶೆಟ್ಟರ್ ಗೆಲುವು ನಿಶ್ಚಿತ, ಕಾಂಗ್ರೆಸ್ ಬರುವುದು ನಿಶ್ಚಿತ..” ರಕ್ತದಲ್ಲಿ ಬರೆದ ಅಭಿಮಾನಿ

04:04 PM Apr 27, 2023 | Team Udayavani |

ಹುಬ್ಬಳ್ಳಿ: ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಜಗದೀಶ್ ಶೆಟ್ಟರ್ ಗೆಲ್ಲಲು ಸಾಧ್ಯವಿಲ್ಲ. ಇದನ್ನು ರಕ್ತದಲ್ಲಿ ಬರೆದುಕೊಡುತ್ತೇನೆ ಎಂದು ಭಾಷಣ ಮಾಡಿದ್ದರು. ಆದರೆ ಇಲ್ಲೊಬ್ಬ ಕಾಂಗ್ರೆಸ್ ಕಟ್ಟಾ ಅಭಿಮಾನಿ ತನ್ನ ರಕ್ತದ ಮೂಲಕವೇ ಶೆಟ್ಟರ ಗೆಲುವು ನಿಶ್ಚಿತ, ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಬರುವುದು ನಿಶ್ಚಿತ ಎಂದು ಬರೆಯುವ ಮೂಲಕ ಟಕ್ಕರ್ ಕೊಟ್ಟಿದ್ದಾನೆ.

Advertisement

ಚುನಾವಣ ಕಾವು ಏರುತ್ತಿರುವಂತೆ ರಾಜಕೀಯ ನಾಯಕರ ಹೇಳಿಕೆಗಳು ಕೂಡ ಬಿರುಸುಪಡೆದುಕೊಳ್ಳುತ್ತಿವೆ. ಅದರಲ್ಲೂ ರಕ್ತದಲ್ಲಿ ಬರೆದುಕೊಡುತ್ತೇನೆ ಎನ್ನುವ ಹೇಳಿಕೆ ಹೆಚ್ಚು ಪ್ರಚಾರ ಪಡೆದುಕೊಳ್ಳುತ್ತಿದೆ. ಅದರೆ ಇಲ್ಲೊಬ್ಬ ಶೆಟ್ಟರ್ ಅವರ ಅಭಿಮಾನಿ ಮಂಜುನಾಥ ಯಟ್ರುವಿ ಎಂಬುವರು ತಮ್ಮ ರಕ್ತದ ಮೂಲಕ ‘ ಮಾನ್ಯ ಜಗದೀಶ ಶೆಟ್ಟರ ಅವರು 100 ಕ್ಕೆ 100 ರಷ್ಟು ವಿಜಯಶಾಲಿ ಆಗುತ್ತಾರೆ ರಕ್ತದಲ್ಲಿ ಬರೆದುಕೊಡುತ್ತೇನೆ. ಈ ಸಾರಿ ಕಾಂಗ್ರೆಸ್ ಸರಕಾರ ರಾಜ್ಯದಲ್ಲಿ ಬರುತ್ತದೆ. ಜೈ ಕಾಂಗ್ರೆಸ್, ಮಂಜುನಾಥ ಯಂಟ್ರುವಿ, ಕಾಂಗ್ರೆಸ್ ಕಾರ್ಯಕರ್ತ ಎಂದು ಬರೆದಿದ್ದಾನೆ. ಕಾರ್ಯಕರ್ತನ ಈ ರಕ್ತದಲ್ಲಿ ಬರೆದುಕೊಡುತ್ತೇನೆ ಎನ್ನುವ  ಸಂದೇಶ ಹೆಚ್ಚು ಸದ್ದು ಮಾಡುತ್ತಿದೆ.

ರಕ್ತದಲ್ಲಿ ಬರೆದುಕೊಡುತ್ತೇನೆ ಎನ್ನುವ ಹೇಳಿಕೆ ಅತೀ ಹೆಚ್ಚು ಬಳಸುವ ನಾಯಕರ ಪೈಕಿ ಬಿ.ಎಸ್.ಯಡಿಯೂರಪ್ಪ ಅವರು ಹೆಚ್ಚು. ಬುಧವಾರ ನಗರಕ್ಕೆ ಆಗಮಿಸಿದ ಸಂದರ್ಭದಲ್ಲಿ ಬಹಿರಂಗ ಭಾಷಣದಲ್ಲಿ ಮಾತನಾಡುತ್ತಾ, ರಕ್ತದಲ್ಲಿ ಬರೆದುಕೊಡುತ್ತೇನೆ ಶೆಟ್ಟರ ಈ ಬಾರಿ ಗೆಲ್ಲಲು ಸಾಧ್ಯವಿಲ್ಲ ಎಂದಿದ್ದರು. ಈ ಹೇಳಿಕೆ ತಮ್ಮ ಪಕ್ಷ ಹಾಗೂ ನಾಯಕರ ವರ್ಚಸ್ಸು ಕುಂದಿಸುತ್ತದೆ. ಅವರು ಸೋಲುತ್ತಾರೆ ಎಂದು ಬಾಯಿ ಮಾತಲ್ಲಿ ಹೇಳಿದ್ದಾರೆ. ಶೆಟ್ಟರ ಅವರು ಗೆಲ್ಲುತ್ತಾರೆ ಎಂದು ರಕ್ತದಲ್ಲಿ ಬರೆದು ನಿಶ್ಚಿತಗೊಳಿಸಿದ್ದೇನೆ. ಕಳೆದ ಬಾರಿಗಿಂತ‌ ಅತೀ ಹೆಚ್ಚು ಮತಗಳಿಂದ ಗೆಲ್ಲಿಸುತ್ತೇವೆ ಎನ್ನುತ್ತಾರೆ ಮಂಜುನಾಥ.

Advertisement

Udayavani is now on Telegram. Click here to join our channel and stay updated with the latest news.

Next