Advertisement

ಕಪ್ಪು ಬಲೂನ್ ಗಳ ಹಾರಾಟ: ವಿಜಯವಾಡದಲ್ಲಿ ಪ್ರಧಾನಿ ಮೋದಿ ಭದ್ರತೆಯಲ್ಲಿ ಲೋಪ

07:01 PM Jul 04, 2022 | Team Udayavani |

ಹೊಸದಿಲ್ಲಿ: ಭದ್ರತಾ ಏಜೆನ್ಸಿಗಳು ಗಂಭೀರವಾಗಿ ಪರಿಗಣಿಸಿರುವ ವಿಚಾರದಲ್ಲಿ, ಸೋಮವಾರ ವಿಜಯವಾಡಕ್ಕೆ ಪ್ರಧಾನಿ ನರೇಂದ್ರ ಮೋದಿ ಭೇಟಿ ನೀಡಿದ ವೇಳೆ ಭದ್ರತಾ ಲೋಪವಾಗಿದ್ದು, ವಿಜಯವಾಡ ವಿಮಾನ ನಿಲ್ದಾಣದಿಂದ ಪ್ರಧಾನಿ ಟೇಕಾಫ್ ಆಗುವಾಗ ಅವರ ಹೆಲಿಕಾಪ್ಟರ್ ಹತ್ತಿರ ಕಪ್ಪು ಬಲೂನ್‌ಗಳು ಕಾಣಿಸಿಕೊಂಡಿವೆ.

Advertisement

ಗನ್ನಾವರಂ ವಿಮಾನ ನಿಲ್ದಾಣದಿಂದ ಪ್ರಧಾನಿ ಮೋದಿ ಅವರ ಹೆಲಿಕಾಪ್ಟರ್ ಟೇಕಾಫ್ ಆದ ಕೂಡಲೇ ಬಲೂನ್‌ಗಳನ್ನು ಹಾರಿಸಿದ್ದಕ್ಕಾಗಿ ನಾಲ್ವರು ಕಾಂಗ್ರೆಸ್ ಪಕ್ಷದ ಪ್ರತಿಭಟನಾಕಾರರನ್ನು ಬಂಧಿಸಲಾಯಿತು, ಅಲ್ಲಿ ವಿಮಾನ ನಿಲ್ದಾಣದ ಸುತ್ತಲೂ ಕಟ್ಟುನಿಟ್ಟಾದ ಭದ್ರತಾ ಕವಚವನ್ನು ಸ್ಥಾಪಿಸಲಾಗಿತ್ತು ಎಂದು ಎಸ್ಪಿ ಸಿದ್ಧಾರ್ಥ್ ಕೌಶಲ್ ಹೇಳಿಕೆ ನೀಡಿದ್ದಾರೆ.

ಪ್ರಧಾನಿಯವರ ಭದ್ರತೆಯನ್ನು ನೋಡಿಕೊಳ್ಳುವ ಎಸ್‌ಪಿಜಿ ಮತ್ತು ಇತರ ಕೇಂದ್ರೀಯ ಏಜೆನ್ಸಿಗಳು ಕೂಡ ತನಿಖೆಯಲ್ಲಿ ಭಾಗಿಯಾಗಿವೆ ಮತ್ತು ವಿಜಯವಾಡದಲ್ಲಿ ಪ್ರಧಾನಿಯ ಭದ್ರತಾ ಉಲ್ಲಂಘನೆಯ ಕುರಿತು ತನಿಖೆಯಲ್ಲಿ ತೊಡಗಿವೆ ಎಂದು ತಿಳಿದುಬಂದಿದೆ. ಈ ವರ್ಷದ ಜನವರಿಯಲ್ಲಿ ಪಂಜಾಬ್‌ನ ಫಿರೋಜ್‌ಪುರ ಜಿಲ್ಲೆಯ ಹುಸೇನಿವಾಲಾ ಬಳಿ ಪ್ರಧಾನಿ ನರೇಂದ್ರ ಮೋದಿ ಅವರ ಬೆಂಗಾವಲು ಪಡೆಯಲ್ಲಿ ಭದ್ರತಾ ಲೋಪವಾಗಿತ್ತು.

 

Advertisement

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next