Advertisement

ದೇಶ ವಿಭಜಿಸಿದ್ದ Congress ಈಗ ಇಬ್ಭಾಗ: ಜೆ.ಪಿ. ನಡ್ಡಾ

10:46 PM Apr 21, 2023 | Team Udayavani |

ಬೀದರ: ಸ್ವಾತಂತ್ರ್ಯ ನಂತರ ದಶಕಗಳ ಕಾಲ ದೇಶವನ್ನು ಒಡೆದಾಳಿದ್ದ ಕಾಂಗ್ರೆಸ್ಸೇ ಈಗ ಇಬ್ಭಾಗವಾಗಿದ್ದು, ಖುದ್ದು ಪಕ್ಷದ ಬಳಿಯೇ ಏನೂ ಇಲ್ಲದಂತಾಗಿದೆ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ವಾಗ್ಧಾಳಿ ನಡೆಸಿದರು.

Advertisement

ನಗರದ ಹೊರವಲಯದ ಹೋಟೆಲ್‌ ವೈಬ್‌ ಸಭಾಂಗಣದಲ್ಲಿ ಶುಕ್ರವಾರ ನಡೆದ ಪ್ರಬುದ್ಧರ ಸಭೆಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್‌ ಆಡಳಿತದಲ್ಲಿ ಸಮಾಜವನ್ನು ಉತ್ತರ-ದಕ್ಷಿಣ, ಭಾಷೆ, ಜಾತಿ-ಧರ್ಮದ ಹೆಸರಿನಲ್ಲಿ ವಿಭಜಿಸಿ ಒಡೆದು ಆಳುವ ಕೆಲಸ ಮಾಡುತ್ತ ಬಂದಿದೆ. ಆದರೆ, ಬಿಜೆಪಿ ತನ್ನ ಸಬ್‌ ಕಾ ಸಾತ್‌ ಸಬ್‌ ಕಾ ವಿಕಾಸ್‌ ಮಂತ್ರವನ್ನು ಅಕ್ಷರಶಃ ಅನುಷ್ಠಾನ ಮಾಡುತ್ತಿದೆ. ದಕ್ಷಿಣ ರಾಜ್ಯಗಳಲ್ಲಿ ಆಡಳಿತ ನಡೆಸುತ್ತಿದ್ದ ಕಾಂಗ್ರೆಸ್‌ ಈಗ ನಿರ್ನಾಮವಾಗಿದೆ. ತಮಿಳುನಾಡಿನಲ್ಲಿ 60 ವರ್ಷಗಳಿಂದ ಅಧಿ ಕಾರ ಹಿಡಿಯಲು ಆಗಲಿಲ್ಲ, ಕೇರಳದಲ್ಲಿಯೂ ಕೂಡ ಪಕ್ಷ ಕುಗ್ಗಿ ಹೋಗಿದೆ ಎಂದರು.

ಕಾಂಗ್ರೆಸ್‌ ಸರ್ಕಾರ ಅಧಿ ಕಾರದಲ್ಲಿರುವ ರಾಜ್ಯಗಳಲ್ಲಿ ಕೇಂದ್ರದ ಮಹತ್ವಾಕಾಂಕ್ಷಿ ಯೋಜನೆಗಳ ಜಾರಿಗೆ ತರದೇ ಜನರನ್ನು ಅವುಗಳ ಲಾಭದಿಂದ ವಂಚಿತರನ್ನಾಗಿ ಮಾಡಲಾಗುತ್ತಿದೆ. ಕರ್ನಾಟಕದಲ್ಲೂ ಕಾಂಗ್ರೆಸ್‌ ಬಂದರೆ ಅಭಿವೃದ್ಧಿಗೆ ಅಡ್ಡಿಯಾಗಲಿದೆ. ಹಾಗಾಗಿ ರಾಜ್ಯದ ಅಭಿವೃದ್ಧಿಯ ವೇಗ ಹೆಚ್ಚಿಸಬೇಕಾದರೆ ಮತ್ತೂಮ್ಮೆ ಡಬಲ್‌ ಎಂಜಿನ್‌ ಸರ್ಕಾರ ಅಧಿ ಕಾರಕ್ಕೆ ತರುವುದು ಅಗತ್ಯವಿದೆ. ಕೇಂದ್ರದಲ್ಲಿ ಪ್ರಧಾನಿ ಮೋದಿ ನೇತೃತ್ವದ ಸರ್ಕಾರ ಬಂದ ನಂತರ ದೇಶ ಅಭಿವೃದ್ಧಿ ಪಥದತ್ತ ಸಾಗುತ್ತಿದ್ದು, ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತವನ್ನು ನೋಡುವ ದೃಷ್ಟಿಕೋನವೇ ಬದಲಾಗಿದೆ. ಹೆಮ್ಮಾರಿ ಕೋವಿಡ್‌ನಿಂದ ವಿಶ್ವವೇ ಕಂಗೆಟ್ಟು, ಹಲವು ಮುಂದುವರೆದ ರಾಷ್ಟ್ರಗಳ ಆರ್ಥಿಕ ಸ್ಥಿತಿ ನೆಲಕಚ್ಚಿದ್ದರೆ ಭಾರತ ಮಾತ್ರ ಸದೃಢವಾಗಿ ನಿಂತಿದ್ದಲ್ಲದೇ ದೇಶದಲ್ಲಿ ಶೇ.100ರಷ್ಟು ಉಚಿತ ಎರಡು ಡೋಸ್‌ ಲಸಿಕೆ ನೀಡಲಾಯಿತು ಎಂದರು.

ರಷ್ಯಾ-ಉಕ್ರೇನ್‌ ಯುದ್ಧ ಸಂದರ್ಭದಲ್ಲಿ ಪ್ರಧಾನಿ ಮೋದಿ ಎರಡೂ ರಾಷ್ಟ್ರಗಳ ಮುಖ್ಯಸ್ಥರೊಂದಿಗೆ ಮಾತುಕತೆ ನಡೆಸಿ ಯುದ್ಧಪೀಡಿತ ಪ್ರದೇಶದಲ್ಲಿ ಸಿಲುಕಿದ್ದ ಸಾವಿರಾರು ಭಾರತೀಯ ವಿದ್ಯಾರ್ಥಿಗಳನ್ನು ಸುರಕ್ಷಿತವಾಗಿ ಸ್ವದೇಶಕ್ಕೆ ಕರೆ ತರುವಲ್ಲಿ ಯಶಸ್ವಿಯಾದದ್ದು ಇತಿಹಾಸ. ಭಾರತ ಎರಡು ಶತಮಾನಗಳ ಕಾಲ ಬ್ರಿಟಿಷರ ದಾಸ್ಯದಲ್ಲಿತ್ತು. ಈಗ ಪ್ರಸ್ತುತ ಕಾಲಚಕ್ರ ಬದಲಾಗಿದ್ದು, ಬ್ರಿಟನ್‌ ದೇಶವನ್ನು ಹಿಂದಿಕ್ಕಿ ಭಾರತ ಇಂದು ವಿಶ್ವದ 6ನೇ ಅತಿ ದೊಡ್ಡ ಆರ್ಥಿಕತೆಯಾಗಿ ಬೆಳೆದು ನಿಂತಿದೆ. ಆದರೆ, ಎಕಾನಾಮಿಯ “ಇ’ ಸಹ ಅರ್ಥವಾಗದ ಕಾಂಗ್ರೆಸ್ಸಿಗರಿಗೆ ತಿಳಿಹೇಳುವುದು ಸುಲಭವಲ್ಲ ಎಂದು ವ್ಯಂಗ್ಯವಾಡಿದರು.

ಕೇಂದ್ರ ಸಚಿವ ಭಗವಂತ ಖೂಬಾ, ಬಿಜೆಪಿ ಅಭ್ಯರ್ಥಿ ಈಶ್ವರಸಿಂಗ್‌ ಠಾಕೂರ್‌ ಮತ್ತು ಪಕ್ಷದ ಜಿಲ್ಲಾಧ್ಯಕ್ಷ ಶಿವಾನಂದ ಮಂಠಾಳಕರ್‌ ಮತ್ತಿತರರು ಪಾಲ್ಗೊಂಡಿದ್ದರು.

Advertisement

ಕನ್ನಡಿಗರಿಗೆ ನಡ್ಡಾ ಬೆದರಿಕೆ: ಪ್ರಿಯಾಂಕಾ ವಾದ್ರಾ ಆರೋಪ
ನವದೆಹಲಿ: ಬಿಜೆಪಿಗೆ ಮತ ನೀಡದಿದ್ದರೆ ಪ್ರಧಾನಿ ನರೇಂದ್ರ ಮೋದಿಯವರ ಆಶೀರ್ವಾದಿಂದ ಕರ್ನಾಟಕ ವಂಚಿತವಾಗಲಿದೆ ಎಂದು ಬಿಜೆಪಿ ಅಧ್ಯಕ್ಷ ಜೆ.ಪಿ.ನಡ್ಡಾ ಬೆದರಿಕೆ ಹಾಕಿದ್ದಾರೆಂದು ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ವಾದ್ರಾ ಆರೋಪಿಸಿದ್ದಾರೆ.

ಈ ಕುರಿತು ಟ್ವೀಟ್‌ ಮಾಡಿರುವ ಅವರು, “ಪ್ರತಿಯೊಬ್ಬ ಕನ್ನಡಿಗ ಬೆವರು ಸುರಿಸಿ, ಶ್ರಮದಿಂದ ರಾಜ್ಯ ನಿರ್ಮಾಣ ಮಾಡಿದ್ದಾರೆ. ಪ್ರತಿಯೊಬ್ಬ ಕನ್ನಡಿಗನೂ ಕರ್ನಾಟಕದ ಭವಿಷ್ಯಕ್ಕಾಗಿ ಮುಕ್ತವಾಗಿ ಮತ ಹಾಕಬೇಕು. ಇದು ರಾಜ್ಯದ ಹೆಮ್ಮೆ ಮತ್ತು ಸಮೃದ್ಧಿಯ ವಿಷಯವಾಗಿದೆ,” ಎಂದು ಬರೆದಿದ್ದಾರೆ.

ಇನ್ನೊಂದೆಡೆ, “ಬಿಜೆಪಿ ಅಧ್ಯಕ್ಷ ಜೆ.ಪಿ.ನಡ್ಡಾ ಅವರ ಎಚ್ಚರಿಕೆಯು, ಕನ್ನಡಿಗರಿಗೆ ಎಚ್ಚರಿಕೆಯ ಗಂಟೆಯಾಗಿದೆ. ಇದು 40 ಪರ್ಸೆಂಟ್‌ ಬಿಜೆಪಿ ಸರ್ಕಾರಕ್ಕೆ ಮನೆ ಕಡೆ ದಾರಿ ತೋರಿಸುವ ಸಮಯವಾಗಿದೆ. ಕರ್ನಾಟಕಕ್ಕೆ ಮೋದಿ ಬೇಕಿಲ್ಲ ಎಂಬುದನ್ನು ಸಾಬೀತುಪಡಿಸಬೇಕಿದೆ,” ಎಂದು ಕಾಂಗ್ರೆಸ್‌ ಟ್ವೀಟ್‌ ಮಾಡಿದೆ.

Advertisement

Udayavani is now on Telegram. Click here to join our channel and stay updated with the latest news.

Next