Advertisement

ಪಾಲಿಕೆ ಚುನಾವಣೆಯಲ್ಲಿ ಕಾಂಗ್ರೆಸ್‌ ಜಯಭೇರಿಗೆ ಶ್ರಮಿಸಿ: ಹರೀಶ್‌ ಕುಮಾರ್‌

11:21 PM Jul 04, 2019 | Sriram |

ಮಹಾನಗರ: ಮಹಾನಗರ ಪಾಲಿಕೆ ಚುನಾವಣೆ ಶೀಘ್ರದಲ್ಲೆ ನಡೆಯವ ಸಾಧ್ಯತೆ ಇದ್ದು ಕಾರ್ಯಕರ್ತರು, ಕಾರ್ಪೊರೇಟರ್‌ಗಳ ಕಾರ್ಯೋನ್ಮು ಖರಾಗಿ ಮತ್ತೆ ಕಾಂಗ್ರೆಸ್‌ ಪಕ್ಷವನ್ನು ಪಾಲಿಕೆಯಲ್ಲಿ ಅಧಿಕಾರಕ್ಕೆ ತರುವಂತೆ ಶ್ರಮಿಸಬೇಕು ದ.ಕ. ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಕೆ. ಹರೀಶ್‌ ಕುಮಾರ್‌ ಕರೆ ನೀಡಿದರು.

Advertisement

ಮಲ್ಲಿಕಟ್ಟೆಯ ಕಾಂಗ್ರೆಸ್‌ ಭವನದಲ್ಲಿ ಜು. 2ರಂದು ಜರಗಿದ ಪಕ್ಷದ ಮಾಸಿಕ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಲೋಕಸಭಾ ಚುನಾವಣೆಯ ಸೋಲಿನಿಂದ ಧೃತಿಗೆಡುವ ಅಗತ್ಯವಿಲ್ಲ. ಸೋಲು ಎಂದಿಗೂ ಶಾಶ್ವತವಲ್ಲ. ಕಾಂಗ್ರೆಸ್‌ ಮತ್ತೆ ಕಾರ್ಯಕರ್ತರ ಹುಮ್ಮಸ್ಸಿನೊಂದಿಗೆ ಫಿನೀಕ್ಷ್ನಂತೆ ಎದ್ದು ನಿಲ್ಲಲಿದೆ. ಮಂಗಳೂರು ದಕ್ಷಿಣ, ಉತ್ತರ ವಿಧಾನಸಭಾ ಕ್ಷೇತ್ರದ ಜನರಿಗೆ ಕಾಂಗ್ರೆಸ್‌ನ ಅಪೂರ್ವ ಸಾಧನೆಗಳು ಮನವರಿಕೆಯಾಗುತ್ತಿದ್ದು, ಪಾಲಿಕೆಯಲ್ಲಿ ಪಕ್ಷವು ಜಯಭೇರಿ ಬಾರಿಸಲಿದೆ. ವಾರ್ಡ್‌ ಮಟ್ಟದಲ್ಲಿ ಪಕ್ಷದ ಸಂಘಟನೆಯು ಬಲ ಗೊಳ್ಳುತ್ತಿದ್ದು ಕಾರ್ಯಕರ್ತರ ಹುರುಪು ಇಮ್ಮಡಿಯಾಗುತ್ತಿದೆ ಎಂದರು. ಪಕ್ಷದ ಪುನಶ್ಚೇತನಕ್ಕೆ ಸಂಬಂಧಪಟ್ಟವರು ಈ ನಿಟ್ಟಿನಲ್ಲಿ ಚರ್ಚೆ ನಡೆದು ತಳಮಟ್ಟದಿಂದ ಪಕ್ಷವನ್ನು ಸಂಘಟಿಸಲು ಪಣತೊಡುವಂತೆ ತಿಳಿಸಲಾಯಿತು.

ಇತ್ತೀಚೆಗೆ ನಿಧನ ಹೊಂದಿದ ಡಿ.ಆರ್‌. ಕಾಮತ್‌, ಎಂ. ಸಂಜೀವ, ಸೀತಾರಾಮ ಶೆಟ್ಟಿಯವರಿಗೆ ಮೌನ ಪ್ರಾರ್ಥನೆ ಸಲ್ಲಿ ಸಲಾಯಿತು.

ಮಾಜಿ ಶಾಸಕ ಜೆ.ಆರ್‌. ಲೋಬೋ, ಮಾಜಿ ಜಿಲ್ಲಾಧ್ಯಕ್ಷ ಇಬ್ರಾಹಿಂ ಕೋಡಿ ಜಾಲ್, ಮಾಜಿ ಗೇರು ಅಭಿವೃದ್ಧಿ ನಿಗಮ ಅಧ್ಯಕ್ಷ ಬಿ.ಎಚ್. ಖಾದರ್‌, ದ.ಕ. ಜಿಲ್ಲಾ ವಕ್ಫ್ ಸಮಿತಿ ಅಧ್ಯಕ್ಷ ಯು.ಕೆ. ಮೋನು, ಮಾಜಿ ಮೇಯರ್‌ ಶಶಿಧರ್‌ ಹೆಗ್ಡೆ, ಬ್ಲಾಕ್‌ ಅಧ್ಯಕ್ಷರಾದ ಮಾಜಿ ಕಾರ್ಪೊರೇಟರ್‌ಗಳು, ದ.ಕ ಜಿಲ್ಲಾ ಪದಾಧಿಕಾರಿಗಳು, ಸದಸ್ಯರು, ಮುಂಚೂಣಿ ಘಟಕಗಳ ಜಿಲ್ಲಾಧ್ಯಕ್ಷರು ಮತ್ತು ಕಾಂಗ್ರೆಸ್‌ ಮುಖಂಡರು ಭಾಗವಹಿಸಿದರು. ಡಿ.ಸಿ.ಸಿ. ಉಪಾಧ್ಯಕ್ಷ ಸದಾಶಿವ ಉಳ್ಳಾಲ್ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next