Advertisement

ಕಾಂಗ್ರೆಸ್ ನವರು ದಾಖಲಾತಿ ಕೊಟ್ಟರೆ ಎಲ್ಲರೂ ರಾಜೀನಾಮೆ ಕೊಡುತ್ತಾರೆ: ಸಚಿವ ಶ್ರೀರಾಮುಲು

04:03 PM May 06, 2022 | Team Udayavani |

ಬಳ್ಳಾರಿ: ಪಿಎಸ್ಐ ನೇಮಕಾತಿ ಪರೀಕ್ಷೆ ಅಕ್ರಮ ಪ್ರಕರಣದ ಬಗ್ಗೆ ಸೂಕ್ತ ತನಿಖೆ ಮಾಡಲಾಗುತ್ತಿದೆ. ಈಗಾಗಲೇ ಕೆಲವು ಅಧಿಕಾರಿಗಳನ್ನು ಅಮಾನತು ಮಾಡಲಾಗಿದೆ. ಕಾಂಗ್ರೆಸ್ ನವರು ದಾಖಲಾತಿ ಕೊಟ್ಟರೆ ಎಲ್ಲರೂ ರಾಜೀನಾಮೆ ಕೊಡುತ್ತಾರೆ ಎಂದು ಸಚಿವ ಶ್ರೀರಾಮುಲು ಹೇಳಿದರು.

Advertisement

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ನಾಯಕರು ಹಿಟ್ ಆ್ಯಂಡ್ ರನ್ ಮಾಡುತ್ತಿದ್ದಾರೆ. ಪಿಎಸ್ಐ ನೇಮಕಾತಿ ವಿಚಾರದಲ್ಲಿ ಕಾಂಗ್ರೆಸ್ ನಾಯಕರು ದಾಖಲೆಗಳಿಲ್ಲದೆ ಆರೋಪ ಮಾಡುತ್ತಿದ್ದಾರೆ. ಒಮ್ಮೆ ಗೃಹ ಸಚಿವ, ಇನ್ನೊಮ್ಮೆ ಅಶ್ವತ್ಥ ನಾರಾಯಣ್, ಇನ್ನೊಮ್ಮೆ ಸಿಎಂ ರಾಜೀನಾಮೆ ಕೊಡಬೇಕು ಎನ್ನುತ್ತಾರೆ. ಮೊದಲು ಅರೋಪಗಳಿಗೆ ದಾಖಲಾತಿ ಕೊಡಲಿ. ದಾಖಲೆ ಇಲ್ಲದೇ ಕೇವಲ ಇವರ ಮಾತುಗಳನ್ನ ಯಾರು ಕೇಳುತ್ತಾರೆ? ಸಣ್ಣ ಖರ್ಗೆ ಅವರು ದಾಖಲಾತಿ ಇಲ್ಲದೆ ಆರೊಪ ಮಾಡುತ್ತಾರೆ. ಸಿಐಡಿ ಅವರು ನೋಟಿಸ್ ಕೊಟ್ಟಿದ್ದಾರೆ, ಅಲ್ಲಿ ಹೋಗಿ ದಾಖಲಾತಿ ಕೊಡಲಿ. ಆಧಾರ ರಹಿತ ಆರೋಪ ಅವರ ಬದ್ದತೆಯನ್ನು ತೋರಿಸುತ್ತದೆ ಎಂದರು.

ಈಶ್ವರಪ್ಪ ಅವರು ಕೂಡಾ ತಪ್ಪು ಮಾಡಿರಲಿಲ್ಲ. ಆ ಪ್ರಕರಣದಲ್ಲಿ ಒಬ್ಬ ವ್ಯಕ್ತಿ ಸಾವನ್ನಪ್ಪಿದ ಪರಿಣಾಮ ಈಶ್ವರಪ್ಪ ರಾಜೀನಾಮೆ ಕೊಟ್ಟರಷ್ಟೇ. ಸರ್ಕಾರಕ್ಕೆ ಮುಜುಗರ ಬೇಡವೆಂದು ಈಶ್ವರಪ್ಪ ರಾಜೀನಾಮೆ‌ ನೀಡಿದ್ದರು. ಕಾಂಗ್ರೆಸ್ ನವರು ಕೇವಲ ಗಾಳಿಯಲ್ಲಿ ಗುಂಡು ಹೊಡೆಯುವ ಕೆಲಸ ಮಾಡುತ್ತಾರೆ ಎಂದು ರಾಮುಲು ಹೇಳಿದರು.

ಇದನ್ನೂ ಓದಿ:ಅಜಂ ಖಾನ್ ಪ್ರಕರಣ: 137 ದಿನ ಜೈಲಿನಲ್ಲಿ ಕಳೆದರೂ ಜಾಮೀನು ಕೊಡಲಿಲ್ಲವೇಕೆ? ಸುಪ್ರೀಂಕೋರ್ಟ್

ಸಿಎಂ ಸ್ಥಾನಕ್ಕೆ 2500 ಕೋಟಿ ಆಫರ್ ಎನ್ನುವ ಯತ್ನಾಳ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಹಣ ಇದ್ದವರು ಮಾತ್ರ ಸಿಎಂ ಆಗುತ್ತಾರೆನ್ನುವುದು ಇತಿಹಾಸದಲ್ಲೇ ಇಲ್ಲ. ಈಗ ಬುದ್ದಿವಂತಿಕೆ, ಜ್ಞಾನವಿದ್ದರೆ ಮಾತ್ರ ಸಿಎಂ ಆಗುತ್ತಾರೆ.  ಜನರ ಆಶೀರ್ವಾದ ಇದ್ದರೆ ಯಾರಾದರೂ ಸಿಎಂ ಆಗಬಹುದು. ಯತ್ನಾಳ ಅವರ ವೈಯಕ್ತಿಕ ಹೇಳಿಕೆಗೆ ಹೆಚ್ಚು ಉತ್ತರಿಸುವುದಿಲ್ಲ ಎಂದರು.

Advertisement

ಡಿಸಿಎಂ ವಿಚಾರವಾಗಿ ಕೇಳಿದ ಪ್ರಶ್ನೆಗೆ ಉತ್ತರಿಸಿದ ಶ್ರೀರಾಮುಲು, ನಾನು ಯಾವುದನ್ನೂ ಅಪೇಕ್ಷೆ ಪಟ್ಟಿಲ್ಲ. ಇದು ಪಕ್ಷಕ್ಕೆ ಬಿಟ್ಟ ವಿಚಾರ ಎಂದರು.

ಎಸ್ ಟಿ ಸಮುದಾಯಕ್ಕೆ ಮೀಸಲಾತಿ ಕೊಟ್ಟೇ ಕೊಡುತ್ತೇವೆ. ನಮ್ಮ ಸರ್ಕಾರ ಕೊಟ್ಟ ಮಾತನ್ನು ನಡೆಸುತ್ತದೆ. ಸ್ವಾಮೀಜಿಗಳ ಮನವೊಲಿಕೆ ಮಾಡುತ್ತಿದ್ದೇವೆ ಎಂದು ಸಚಿವ ಶ್ರೀರಾಮುಲು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next