Advertisement

Politics: ರಾಷ್ಟ್ರಪತಿ ಹೆಸರಲ್ಲಿ ಕಾಂಗ್ರೆಸ್‌ ಚಿಲ್ಲರೆ ರಾಜಕಾರಣ: ಜೋಷಿ

11:34 PM Sep 24, 2023 | Team Udayavani |

ಹುಬ್ಬಳ್ಳಿ: ನೂತನ ಸಂಸತ್‌ ಭವನ ವಿಷಯ ಮುಂದಿಟ್ಟು ರಾಷ್ಟ್ರಪತಿ ಹೆಸರಲ್ಲಿ ಕಾಂಗ್ರೆಸ್‌ ಚಿಲ್ಲರೆ ರಾಜಕಾರಣ ಮಾಡುತ್ತಿದೆ ಎಂದು ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ ಜೋಷಿ ಆರೋಪಿಸಿದರು.

Advertisement

ಕಲಘಟಗಿ ತಾಲೂಕಿನ ಗಂಜಿ ಗಟ್ಟಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್‌ ನವರು ರಾಷ್ಟ್ರಪತಿ ಚುನಾವಣೆ ಯಲ್ಲಿ ದ್ರೌಪದಿ ಮುರ್ಮುಗೆ ಬೆಂಬಲ ನೀಡದೆ ಯಾಕೆ ಮೇಲ್ಜಾತಿಯವರನ್ನು ಕಣಕ್ಕೆ ಇಳಿಸಿದರು? ಎಲ್ಲದರಲ್ಲೂ ಚಿಲ್ಲರೆ ರಾಜ ಕಾರಣ ಮಾಡುವುದು ಕಾಂಗ್ರೆಸ್‌ ಸ್ವಭಾವವಾಗಿದೆ ಎಂದರು.

ಹೊಸ ಸಂಸತ್‌ ಭವನ ಪ್ರಧಾನಿ ಮೋದಿ ಮಲ್ಟಿಫ್ಲೆಕ್ಸ್‌ ಎಂಬ ಕಾಂಗ್ರೆಸ್‌ ಮುಖಂಡ ಜೈರಾಮ ರಮೇಶ್‌ ಹೇಳಿಕೆ ಅತ್ಯಂತ ಕ್ಷುಲ್ಲಕ. ಭವನವನ್ನು ಇಡೀ ಜಗತ್ತು ಮೆಚ್ಚು ತ್ತಿರುವಾಗ ಇಂಥ ಹೇಳಿಕೆ ಅವರ ಮನಸ್ಥಿತಿಗೆ ಸಾಕ್ಷಿ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next