Advertisement

ವಿಪಕ್ಷೀಯರೆಲ್ಲ ಭ್ರಷ್ಟರು,ಆಳುವ ಪಕ್ಷದವರೆಲ್ಲ ಸುಭಗರು : ಸಿಬಲ್‌ ಕಟಕಿ

03:30 PM Jul 08, 2017 | Team Udayavani |

ಹೊಸದಿಲ್ಲಿ : ‘ವಿರೋಧ ಪಕ್ಷಗಳ ನಾಯಕರ ವಿರುದ್ಧ ಜಾರಿ ನಿರ್ದೇಶನಾಲಯ ಮತ್ತು ಸಿಬಿಐ ನಿಂದ ನಿರಂತರ ದಾಳಿಗಳು ನಡೆಯುತ್ತಿರುವುದನ್ನು ಕಂಡರೆ ಕೇವಲ ಬಿಜೆಪಿ ಮತ್ತು ಅದರ ಮಿತ್ರ ಪಕ್ಷಗಳವರು ಮಾತ್ರವೇ ಪರಿಶುದ್ಧವಾಗಿದ್ದು ಉಳಿದವರೆಲ್ಲರೂ ಭ್ರಷ್ಟರು ಎನ್ನುವ ಭಾವನೆ ಬರುವಂತಿದೆ’ ಎಂದು ಹಿರಿಯ ಕಾಂಗ್ರೆಸ್‌ ನಾಯಕ ಕಪಿಲ್‌ ಸಿಬಲ್‌ ಕಟಕಿಯಾಡಿದ್ದಾರೆ. 

Advertisement

‘ಆರ್‌ಜೆಡಿ ಮುಖ್ಯಸ್ಥ  ಲಾಲು ಪ್ರಸಾದ್‌ ಯಾದವ್‌ ಮತ್ತು ಅವರ ಕುಟುಂಬ ಸದಸ್ಯರ ಆಸ್ತಿ ಪಾಸ್ತಿಗಳ ಮೇಲೆ ಸಿಬಿಐ, ಇಡಿ ದಾಳಿಗಳು ನಡೆಯುತ್ತಿರುವುದನ್ನು ಉದ್ದೇಶಿಸಿಯೇ ನೀವು ಈ ಮಾತನ್ನು ಹೇಳುತ್ತಿದ್ದೀರಾ?’ ಎಂದು ಮಾಧ್ಯಮದವರು ಕೇಳಿದ ಪ್ರಶ್ನೆಗೆ ನೇರ ಉತ್ತರ ನೀಡಲು ಸಿಬಲ್‌ ನಿರಾಕರಿಸಿದರು. 

“ದಾಳಿಗಳು ಮತ್ತು ಆರೋಪಗಳಿಗೆ ಸಂಬಂಧಿಸಿದಂತೆ, ನನ್ನ ಬಳಿ ಪೂರ್ತಿ ಮಾಹಿತಿಗಳಿಲ್ಲ; ಹಾಗಾಗಿ ಆ ಬಗ್ಗೆ ನಾನು ಏನನ್ನೂ ಹೇಳಲಾರೆ. ಆದರೆ ಸರಕಾರಕ್ಕೆ ನನ್ನದೊಂದು ಸಣ್ಣ ಪ್ರಶ್ನೆ : ಈ ದೇಶದಲ್ಲಿ ವಿರೋಧ ಪಕ್ಷದವರು ಮಾತ್ರವೇ ಭ್ರಷ್ಟರೇ ? ಆಳುವ ಪಕ್ಷ ಮತ್ತು ಅದರ ಮಿತ್ರ ಪಕ್ಷಗಳವರು ಪೂರ್ಣವಾಗಿ ಪರಿಶುದ್ಧರೇ ?’ ಎಂದು ಕಟಕಿಯಾಡಿದರು. 

Advertisement

Udayavani is now on Telegram. Click here to join our channel and stay updated with the latest news.

Next