Advertisement

ಭದ್ರತಾ ಪ್ರಣಾಳಿಕೆ ಪ್ರಕಟಿಸಿದ ಕಾಂಗ್ರೆಸ್‌

12:42 AM Apr 22, 2019 | Sriram |

ಹೊಸದಿಲ್ಲಿ: ದೇಶದ ಭದ್ರತಾ ಪ್ರಣಾಳಿಕೆಯನ್ನು ರವಿವಾರ ಕಾಂಗ್ರೆಸ್‌ ಪ್ರಕಟಿಸಿತಾದರೂ, ಇದು ಚುನಾವಣೆಯಲ್ಲಿ ಪ್ರಮುಖ ವಿಷಯವಲ್ಲ ಎಂದೂ ಹೇಳಿಕೊಂಡಿದೆ. ಸರ್ಜಿಕಲ್‌ ದಾಳಿ ನೇತೃತ್ವ ವಹಿಸಿದ್ದ ನಿವೃತ್ತ ಲೆ. ಜ ಡಿ.ಎಸ್‌.ಹೂಡಾ ನೇತೃತ್ವದಲ್ಲಿ ಈ ಪ್ರಣಾಳಿಕೆಯನ್ನು ಕಾಂಗ್ರೆಸ್‌ ರೂಪಿಸಿದೆ.

Advertisement

ಇದನ್ನು ಬಿಡುಗಡೆ ಮಾಡಿದ ಕಾಂಗ್ರೆಸ್‌ ಮುಖಂಡ ಪಿ.ಚಿದಂಬರಂ ಮತ್ತು ಜೈರಾಮ್‌ ರಮೇಶ್‌, ಚುನಾವಣೆಯಲ್ಲಿ ಪ್ರಮುಖ ವಿಷಯವೇ ನಿರುದ್ಯೋಗ, ರೈತರ ಸಂಕಷ್ಟಗಳಾಗಿವೆ. ಅನಂತರದಲ್ಲಿ ಸಮಾಜದಲ್ಲಿನ ದಲಿತರು, ಮಹಿಳೆಯರು ಹಾಗೂ ಇತರ ಸಮುದಾಯದ ಜನರ ಸುರಕ್ಷತೆಯ ವಿಚಾರವಿರುತ್ತದೆ ಎಂದು ಹೇಳಿದ್ದಾರೆ. ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಈ ಎಲ್ಲ ವಿಷಯಗಳ ಬಗ್ಗೆ ಚರ್ಚೆ ನಡೆಸುತ್ತಾರೆ ಹಾಗೂ ಚುನಾವಣಾ ರ್ಯಾಲಿಗಳಲ್ಲಿ ಮಾತನಾಡುತ್ತಾರೆ.

ದೇಶದ ಭದ್ರತೆಯನ್ನು ಕಾಪಾಡುವ ನಿಟ್ಟಿನಲ್ಲಿ ನಮ್ಮ ಯೋಜನೆಗಳನ್ನು ಈ ಪ್ರಣಾಳಿಕೆಯಲ್ಲಿ ವಿವರಿಸಲಾಗಿದೆ ಎಂದು ಚಿದಂಬರಂ ಹೇಳಿದ್ದಾರೆ. ನಿವೃತ್ತ ಲೆ| ಜ| ಹೂಡಾ ಮಾತನಾಡಿ, ದೇಶದ ಭದ್ರತೆಯನ್ನು ಇನ್ನಷ್ಟು ಹೆಚ್ಚಿಸಲು ಅಗತ್ಯ ಅನುದಾನವನ್ನು ಒದಗಿಸಬೇಕಿದ ಎಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next