Advertisement

ನಾಟಕದಲ್ಲಿ ಸಿದ್ದುಗೆ ಅವಮಾನ

03:20 PM Jan 11, 2023 | Team Udayavani |

ಮೈಸೂರು: ಇತ್ತೀಚೆಗೆ ರಂಗಾಯಣದಲ್ಲಿ ಪ್ರದರ್ಶನಗೊಂಡ ಚಂದ್ರಶೇಖರ ಕಂಬಾರರ ಕೃತಿ ಆಧರಿಸಿದ ಸಾಂಬಶಿವ ಪ್ರಹಸನ ನಾಟಕದಲ್ಲಿ ವಿಪಕ್ಷ ನಾಯಕ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ವಿರುದ್ಧ ಅವಹೇಳ ಮಾಡಿರುವುದನ್ನು ಖಂಡಿಸಿ ಸ್ವಾಭಿಮಾನಿ ಹೋರಾಟ ವೇದಿಕೆಯಿಂದ ಪ್ರತಿಭಟನಾ ಮೆರವಣಿಗೆ ನಡೆಯಿತು.

Advertisement

ವೇದಿಕೆ ನೇತೃತ್ವದಲ್ಲಿ ಮೈಸೂರು ವಿಶ್ವವಿದ್ಯಾಲ ಯದ ಓವೆಲ್‌ ಮೈದಾನದಲ್ಲಿ ಜಮಾವಣೆ ಗೊಂಡ ಕಾಂಗ್ರೆಸ್‌ ನಾಯಕರು, ಕುರುಬ ಸಂಘದ ಪದಾಧಿಕಾರಿಗಳು ಖಂಡನಾ ಸಭೆ ನಡೆಸಿದರು.

ಜಿಲ್ಲೆಯ ಮೂಲೆ ಮೂಲೆಗಳಿಂದ ಸಿದ್ದರಾಮಯ್ಯ ಅಭಿಮಾನಿಗಳು ನೂರಾರು ಸಂಖ್ಯೆಯಲ್ಲಿ ಜಮಾವಣೆಗೊಂಡು, ರಂಗಾ ಯಣ ನಿರ್ದೇಶಕ ಅಡ್ಡಂಡ ಸಿ.ಕಾರ್ಯಪ್ಪ, ಸಾಂಬಶಿವ ಪ್ರಹಸನ ನಾಟಕದ ನಿರ್ದೇಶಕನ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತ ಪಡಿಸಿದರು. ರಂಗಾಯಣದಲ್ಲಿ ದಲಿತ, ಹಿಂದುಳಿದ ಮತ್ತು ಅಲ್ಪಸಂಖ್ಯಾತರನ್ನು ಅವ ಮಾನಿಸುವ ಕೆಲಸ ಮಾಡಲಾಗುತಿದೆ. ಬಡವರ ಹಸಿವನ್ನು ಅಣಕಿಸಲಾಗುತ್ತಿದೆ. ವೈದಿಕ ಪರಂಪರೆ ಯನ್ನು ಬಿತ್ತಿ, ಪ್ರಜಾಪ್ರಭುತ್ವವನ್ನು ಶಿಥಿಲ ಮಾಡುವ ಕೆಲಸಗಳು ನಡೆಯುತ್ತಿವೆ ಎಂದು ಆರೋಪಿಸಿದರು.

ಅಡ್ಡಂಡ ಕಾರ್ಯಪ್ಪ ಎಂಎಲ್‌ಸಿ ಅಗಬೇಕು ಎನ್ನುವ ಹಂಬಲ ಇಟ್ಟುಕೊಂಡು ಕಾಂಗ್ರೆಸ್‌ ಟೀಕಿಸುವ ಬರದಲ್ಲಿ ದಲಿತರು, ಹಿಂದುಳಿದವರು, ಅಲ್ಪ ಸಂಖ್ಯಾತರಿಗೂ ಅವಮಾನ ಮಾಡುತ್ತಿದ್ದಾರೆ ಎಂದು ದೂರಿದರು. ಈ ಸಂದರ್ಭ ಕೆಪಿಸಿಸಿ ಕಾರ್ಯಾಧ್ಯಕ್ಷ ಧ್ರುವನಾರಾಯಣ ಮಾತನಾಡಿ, ರಂಗಾಯಣ ಸಂಸ್ಥೆಯೊಂದಿಗೆ ಕಳೆದ 20 ವರ್ಷಗಳೊಂದಿಗೆ ನನಗೆ ಒಡನಾಟವಿದೆ. ಜನಸಾಮಾನ್ಯರೊಂದಿಗೆ ಅರಿವು ಮೂಡಿಸಿ, ಸಮಾಜದಲ್ಲಿ ಬದಲಾವಣೆ, ಜಾಗೃತಿ ತರುವ ನಿಟ್ಟಿನಲ್ಲಿ ಸಂಸ್ಥೆ ಕೆಲಸ ಮಾಡುತ್ತಿತ್ತು. ಈಗ ಬೀದಿ, ಹಾದಿಗಳಲ್ಲಿ ರಂಪ ಮೂಡಿಸಲಾಗುತ್ತಿದೆ ಎಂದು ಆಕ್ರೋಶ ಹೊರಹಾಕಿದರು.

ರಂಗಾಯಣ ಮುತ್ತಿಗೆ ಯತ್ನ: ಖಂಡನಾ ಸಭೆ ನಡೆಸಿದ ಬಳಿಕ ರಂಗಾಯಣಕ್ಕೆ ಮುತ್ತಿಗೆ ಹಾಕಲು ಪ್ರತಿಭಟನಾಕಾರರು ಮುಂದಾದರು. ಪ್ರತಿಭಟನಾಕಾರರು ಮೆರವಣಿಗೆ ಮೂಲಕ ರಂಗಾಯಣದತ್ತ ಸಾಗುತ್ತಿದ್ದ ವೇಳೆ ಪೊಲೀಸರು ಮಾರ್ಗ ಮಧ್ಯದಲ್ಲೇ ತಡೆಯೊಡ್ಡಿದರು. ಈ ವೇಳೆ ಪ್ರತಿಭಟನಕಾರರು ಅಡ್ಡಂಡ ಕಾರ್ಯಪ್ಪ ಅವರ ಅಣಕುಶವ ಪ್ರದರ್ಶಿಸಲು ಮುಂದಾದರು.

Advertisement

ಇದಕ್ಕೆ ಪೊಲೀಸರು ತಡೆಯೊಡ್ಡಿದರು. ಪ್ರತಿಭಟನೆಯಲ್ಲಿ ಕೆಪಿಸಿಸಿ ವಕ್ತಾರ ಎಂ. ಲಕ್ಷ್ಮಣ್‌, ಕಾಂಗ್ರೆಸ್‌ ಜಿಲ್ಲಾ ಗ್ರಾಮಾಂತರ ಘಟಕದ ಅಧ್ಯಕ್ಷ ಬಿ.ಜೆ.ವಿಜಯ್‌ ಕುಮಾರ್‌, ವಿಧಾನ ಪರಿಷತ್‌ ಸದಸ್ಯ ಡಾ.ಡಿ.ತಿಮ್ಮಯ್ಯ, ಮಾಜಿ ಶಾಸಕರಾದ ಕಳಲೆ ಕೇಶವಮೂರ್ತಿ, ಎಂ.ಕೆ.ಸೋಮಶೇಖರ್‌, ಕುರುಬರ ಸಂಘದ ಅಧ್ಯಕ್ಷ ಎಂ.ಸುಬ್ರಹ್ಮಣ್ಯ, ಮುಖಂಡರಾದ ಪುಷ್ಪಾ ಅಮರನಾಥ್‌, ಹರೀಶ್‌ಗೌಡ, ಎಚ್‌.ಎ. ವೆಂಕಟೇಶ್‌, ಪಾಲಿಕೆ ಸದಸ್ಯರಾದ ಆಯೂಬ್‌ ಖಾನ್‌, ಗೋಪಿ, ಪುಷ್ಪಲತಾ ಜಗನ್ನಾಥ್‌ ಸೇರಿದಂತೆ ಅನೇಕರು ಇದ್ದರು.

ಮೈಸೂರಿಗೆ ರಂಗಾಯಣವು ಸಾಕಷ್ಟು ಕೊಡುಗೆ ನೀಡಿದೆ. ಅಡ್ಡಂಡ ಕಾರ್ಯಪ್ಪ ಸಂಸ್ಥೆಯ ಜವಾಬ್ದಾರಿ ವಹಿಸಿಕೊಂಡ ಬಳಿಕ ಅಶಾಂತಿಯ ವಾತಾವರಣ ನಿರ್ಮಾಣವಾಗಿದೆ. ರಂಗಾಯಣ ವೀಗ ರಂಪಾಯಣವಾಗಿ ಮಾರ್ಪಟ್ಟಿದೆ. – ಆರ್‌. ಧ್ರುವನಾರಾಯಣ, ಕೆಪಿಸಿಸಿ ಕಾರ್ಯಾಧ್ಯಕ್ಷ.

Advertisement

Udayavani is now on Telegram. Click here to join our channel and stay updated with the latest news.

Next