Advertisement

ಮೋದಿಗೆ ದಕ್ಷಿಣ ಭಾರತೀಯರ ಮೇಲೆ ಹಗೆ; ಹಾಗಾಗಿ ನಾನು ವಯನಾಡಿಗೆ

08:57 AM Apr 03, 2019 | Vishnu Das |

ಹೊಸದಿಲ್ಲಿ: ನರೇಂದ್ರ ಮೋದಿ ದಕ್ಷಿಣದವರ ಮೇಲೆ ಹಗೆತನ ಹೊಂದಿದ್ದಾರೆ. ಹೀಗಾಗಿ ಕೇರಳದ ವಯನಾಡುವಿನಿಂದ ಸ್ಫರ್ಧಿಸುತ್ತಿದ್ದೇನೆ ಎಂದು ಎಐಸಿಸಿ ಅಧ್ಯಕ್ಷ ರಾಹುಲ್‌ ಗಾಂಧಿ ಹೇಳಿಕೆ ನೀಡಿದ್ದಾರೆ.

Advertisement

ಕಾಂಗ್ರೆಸ್‌ ಪಕ್ಷದ ಪ್ರಣಾಳಿಕೆ ‘ಹಮ್‌ ಮಿಲಾಯೆಂಗೆ ‘ಬಿಡುಗಡೆಗೊಳಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು.

ಈಗಿನ ಸರಕಾರ ದಕ್ಷಿಣ ಭಾರತೀಯರ ಬಗ್ಗೆ ಗಮನ ಹರಿಸುತ್ತಿಲ್ಲ ಎನ್ನುವ ಬಲವಾದ ಭಾವನೆ ಇದೆ. ಆ ಭಾವನೆಯನ್ನು ಹೋಗಲಾಡಿಸುವ ಸಲುವಾಗಿ ನಾನು ವಯನಾಡಿನಿಂದ ಕಣಕ್ಕಿಳಿಯುತ್ತಿದ್ದೇನೆ.ನನಗೆ ದಕ್ಷಿಣ ಭಾರತದ ಕ್ಷೇತ್ರದಿಂದ ಸ್ಫರ್ಧಿಸಲು ಬೇಡಿಕೆ ಇತ್ತು ಎಂದರು.

ನಾನು ನಿಮ್ಮೊಂದಿಗೆ ಇದ್ದೇನೆ ಎನ್ನುವ ಸಂದೇಶ ನೀಡುವ ಸಲುವಾಗಿ ಅಲ್ಲಿ ಸ್ಪರ್ಧೆಗೆ ಮುಂದಾಗಿದ್ದೇನೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next