Advertisement

Congress ಪಕ್ಷ ಕಿತ್ತಾಡಿಕೊಂಡು ಈ ಚುನಾವಣೆಯಲ್ಲಿ ನಶಿಸಿ ಹೋಗುತ್ತದೆ: ತೇಜಸ್ವಿ ಸೂರ್ಯ

03:19 PM Apr 08, 2023 | Team Udayavani |

ಬೀದರ್ :ಕಾಂಗ್ರೆಸ್ ಪಕ್ಷದಲ್ಲಿ ಟಿಕೆಟ್ ಹಂಚಿಕೆಯಲ್ಲಿ ಮಾತ್ರವಲ್ಲ ಮುಖ್ಯಮಂತ್ರಿ ಅಭ್ಯರ್ಥಿಗಳ ಮಧ್ಯವೂ ಬಂಡಾಯ ಇದೆ ಎಂದು ಬಿಜೆಪಿ ಯುವ ಮೋರ್ಚಾ ರಾಷ್ಟ್ರೀಯ ಅಧ್ಯಕ್ಷ ತೇಜಸ್ವಿ ಸೂರ್ಯ ಹೇಳಿದರು.

Advertisement

ನಗರದಲ್ಲಿ ಶನಿವಾರ ಸುದ್ದಿಗಾರರ ಜತೆ ಮಾತನಾಡಿದ ಅವರು, ಸಿಎಂ ಕುರ್ಚಿಗಾಗಿ ಕಾಂಗ್ರೆಸ್ ನಲ್ಲಿ ಗುದ್ದಾಟ ನಡೆದಿದೆ. ಇನ್ನೂ ಟಿಕೆಟ್ ವಂಚಿತರು ಬಂಡಾಯ ಆಗೋದು ಸಾಮಾನ್ಯ. ಇದು ಕಾಂಗ್ರೆಸ್ ನ ಸಂಸ್ಕೃತಿಯಾಗಿದೆ. ಅವರವರೇ ಕಿತ್ತಾಡಿಕೊಂಡು ಈ ಚುನಾವಣೆಯಲ್ಲಿ ನಶಿಸಿ ಹೋಗುತ್ತಾರೆ ಎಂದು ವ್ಯಂಗ್ಯವಾಡಿದರು.

ಎಸ್ ಡಿಪಿಐ ಹಾಗೂ ಪಿಎಫ್ಐ ಒಂದೇ ನಾಣ್ಯದ ಎರಡು ಮುಖಗಳು. ಎಷ್ಟೋ ಚುನಾವಣೆಯಲ್ಲಿ ಕಾಂಗ್ರೆಸ್ ಎಸ್ ಡಿಪಿಐ ಹಾಗೂ ಪಿಎಫ್ಐ ಜೊತೆ ಕೈಜೋಡಿಸಿದೆ. ಕಾಂಗ್ರೆಸ್ ನ ಬಿ ಟೀಮನಂತೆ ಆ ಸಂಘಟನೆಗಳು ಕೆಲಸ ಮಾಡುತ್ತಿವೆ. ಬ್ಯಾನ್ ಆಗಿರುವ ಪಿಎಫ್ ಐ ನ ಕಾರ್ಯಕರ್ತರು ಎಸ್ ಡಿಪಿಐ ಸೇರೋದು ಜಗಜ್ಜಾಹೀರಾಗಿದೆ. ಈ ಸಮಯದಲ್ಲೂ ಕಾಂಗ್ರೆಸ್ ಮಾತನಾಡುತ್ತಿಲ್ಲ ಅಂದರೆ ಆ ಪಕ್ಷದ ವೋಟ್ ಬ್ಯಾಂಕ್ ಪಾಲಿಟಿಕ್ಸ್ ಏನೆಂದು ಮೊತ್ತೊಮ್ಮೆ ಜಗಜ್ಜಾಹೀರಾಗಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next