Advertisement

ಕಾಂಗ್ರೆಸ್‌ ಪಕ್ಷ ಅಧಿಕಾರಕ್ಕೇರಲಿದೆ: ಜಿಲ್ಲಾಧ್ಯಕ್ಷ ವಿಶ್ವಾಸ

11:01 AM May 26, 2019 | Team Udayavani |

ಸುಳ್ಯ: ನಗರ ಪಂಚಾಯತ್‌ ಚುನಾವಣೆ ಯಲ್ಲಿ ಕಾಂಗ್ರೆಸ್‌ ಪಕ್ಷ ಸಮರ್ಥ ಅಭ್ಯರ್ಥಿಗಳ ತಂಡವನ್ನು ಕಣಕ್ಕಿಳಿಸಿದ್ದು, ಈ ಬಾರಿ ಸ್ಪಷ್ಟ ಬಹುಮತ ದೊಂದಿಗೆ ಕಾಂಗ್ರೆಸ್‌ ಪಕ್ಷ ಸುಳ್ಯ ನಗರ ಪಂಚಾಯತ್‌ನಲ್ಲಿ ಅಧಿಕಾರ ಪಡೆಯಲಿದೆ ಎಂದು ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ, ವಿಧಾನ ಪರಿಷತ್‌ ಸದಸ್ಯ ಹರೀಶ್‌ ಕುಮಾರ್‌ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

Advertisement

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಜಿಲ್ಲೆಯ ಮೂಡುಬಿದಿರೆ, ಮೂಲ್ಕಿ ಹಾಗೂ ಸುಳ್ಯ ಪಟ್ಟಣ ಪಂಚಾಯತ್‌ಗಳಿಗೆ ಚುನಾವಣೆ ನಿಗದಿಯಾಗಿದೆ. ಮೂರು ಕಡೆಯೂ ಕಾಂಗ್ರೆಸ್‌ ಅಧಿಕಾರಕ್ಕೆ ಬರಲಿದೆ. ನಗರವನ್ನು ಸರ್ವತೋಮುಖ ಅಭಿವೃದ್ಧಿ ಮಾಡುವ ಸಲುವಾಗಿ ರಾಜ್ಯ ಸರಕಾರದಿಂದ ಅನುದಾನ ತರಿಸಲಾಗುವುದು ಎಂದು ಹೇಳಿದರು.

ವೆಂಟೆಡ್‌ ಡ್ಯಾಂ ನಿರ್ಮಾಣ
ಸುಳ್ಯದಲ್ಲಿ ಒಳಚರಂಡಿ ವ್ಯವಸ್ಥೆ, ತ್ಯಾಜ್ಯ ವಿಲೇವಾರಿ ಘಟಕ, ಕುಡಿಯುವ ನೀರಿಗೆ ಶಾಶ್ವತ ಯೋಜನೆ ಅನುಷ್ಠಾನಕ್ಕೆ ಬಂದಿಲ್ಲ. ಕಾಂಗ್ರೆಸ್‌ ಅಧಿಕಾರಕ್ಕೆ ಬಂದಲ್ಲಿ ಈ ಬೇಡಿಕೆಗಳಿಗೆ ಸ್ಪಂದಿಸಲಾಗುವುದು. ವೆಂಟೆಡ್‌ ಡ್ಯಾಂ ನಿರ್ಮಿಸಿ ಪಟ್ಟಣಕ್ಕೆ ನೀರಿನ ವ್ಯವಸ್ಥೆ ಮಾಡಲಾಗುವುದು ಎಂದು ಹರೀಶ್‌ ಕುಮಾರ್‌ ಹೇಳಿದರು.

13-14 ಸ್ಥಾನ
ಸುಳ್ಯ ನಗರ ಪಂಚಾಯತ್‌ ಚುನಾವಣೆಯಲ್ಲಿ ಕಾಂಗ್ರೆಸ್‌ 13ರಿಂದ 14 ಸ್ಥಾನಗಳನ್ನು ಗೆದ್ದು ಆಡಳಿತಕ್ಕೆ ಬರಲಿದೆ ಎಂದು ಸುಳ್ಯ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಎನ್‌. ಜಯಪ್ರಕಾಶ್‌ ರೈ ಹೇಳಿದರು.

ಕೆ.ಪಿ.ಸಿ.ಸಿ. ಕಾರ್ಯದರ್ಶಿ ಎಂ. ವೆಂಕಪ್ಪ ಗೌಡ, ಮಡಿಕೇರಿ ನಗರಸಭೆಯ ಮಾಜಿ ಅಧ್ಯಕ್ಷ ನಂದಕುಮಾರ್‌, ನಗರ ಪಂಚಾಯತ್‌ ಚುನಾವಣ ಅಭ್ಯರ್ಥಿಗಳಾದ ಕೆ.ಎಂ. ಮುಸ್ತಫ, ಕೆ. ಗೋಕುಲ್‌ದಾಸ್‌, ಧೀರ ಕ್ರಾಸ್ತ, ಶಶಿಧರ್‌ ಎಂ.ಜೆ., ಸುಜಯ ಕೃಷ್ಣ, ಶ್ರೀಲತಾ ಪ್ರಸನ್ನ, ಚಂದ್ರಕುಮಾರ್‌, ಉಮ್ಮರ್‌ ಎಸ್‌.ಎಂ., ಬಾಲಕೃಷ್ಣ ಭಟ್‌ ಕೊಡೆಂಕೇರಿ, ಪ್ರೇಮಲತಾ ನಾರಾಯಣ, ಚಂದ್ರಕಲಾ ಪ್ರಭಾಕರ್‌, ಯುವ ಕಾಂಗ್ರೆಸ್‌ ಅಧ್ಯಕ್ಷ ಸಿದ್ದಿಕ್‌ ಕೊಕ್ಕೊ, ಮಹಿಳಾ ಕಾಂಗ್ರೆಸ್‌ ಅಧ್ಯಕ್ಷೆ ಗೀತಾ ಕೋಲ್ಚಾರ್‌, ಕಾಂಗ್ರೆಸ್‌ ಮುಖಂಡರಾದ ಎಸ್‌ .ಸಂಶುದ್ದೀನ್‌, ಸತೀಶ್‌ ಕೂಜುಗೋಡು, ಲಕ್ಷಿ ಸುಬ್ರಹ್ಮಣ್ಯ, ಪ್ರವೀಣ್‌ ರೈ ಮರುವಂಜ, ರಫೀಕ್‌ ಪಡು, ಲಕ್ಷ್ಮಣ ಶೆಣೈ, ಸುಧೀರ್‌ ರೈ ಮೇನಾಲ, ಸತ್ಯಕುಮಾರ್‌ ಆಡಿಂಜ, ನಾರಾಯಣ ಜಟ್ಟಿಪಳ್ಳ, ನಾರಾಯಣ ಟೈಲರ್‌, ಚಂದ್ರ ಕಂದಡ್ಕ, ಪ್ರಭಾಕರ ನಾಯಕ್‌ ಉಪಸ್ಥಿತರಿದ್ದರು.

Advertisement

ವರದಿ ಬಂದ ಮೇಲೆ ಕ್ರಮ
ಒಂದು ಕ್ಷೇತ್ರದಲ್ಲಿ ಒಬ್ಬರಿಗೆ ಮಾತ್ರ ಸ್ಪರ್ಧಿಸಲು ಸಾಧ್ಯವಾಗುವುದು. ಆಕಾಂಕ್ಷಿಗಳು ಹಲವು ಮಂದಿ ಇರಬಹುದು. ಅವಕಾಶ ಸಿಗದವರು ಅಸಮರ್ಥರು ಎಂದು ಅರ್ಥವಲ್ಲ. ಬಂಡಾಯವಾಗಿ ಕಣದಲ್ಲಿರುವ ಅಭ್ಯರ್ಥಿಗಳೊಂದಿಗೆ ನಾಯಕರು ಮಾತನಾಡಿದ್ದಾರೆ. ಆದರೆ ಕೆಲವರು ನಾಮಪತ್ರ ವಾಪಸ್‌ ಪಡೆದಿಲ್ಲ. ಈ ವಿದ್ಯಮಾನಗಳ ಕುರಿತು ಬ್ಲಾಕ್‌ ಅಧ್ಯಕ್ಷರು ವರದಿ ಸಲ್ಲಿಸುತ್ತಾರೆ. ವರದಿ ಬಂದ ಬಳಿಕ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧ್ಯಕ್ಷ ಹರೀಶ್‌ ಕುಮಾರ್‌ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next