Advertisement

ಪಂಜಾಬ್‌ ಸಿಎಂ ವಿರುದ್ಧ ಹೇಳಿಕೆ: ಸಚಿವ ಸಿಧು ವಿರುದ್ಧ ಕಾಂಗ್ರೆಸ್‌ ಹೈಕಮಾಂಡ್‌ ಕ್ರಮ?

09:26 AM May 22, 2019 | Sathish malya |

ಹೊಸದಿಲ್ಲಿ : ಪಂಜಾಬ್‌ ಮುಖ್ಯಮಂತ್ರಿ ಅಮರೀಂದರ್‌ ಸಿಂಗ್‌ ವಿರುದ್ಧ ಅನಪೇಕ್ಷಿತ ಹೇಳಿಕೆಗಳನ್ನು ನೀಡಿರುವ ಕ್ಯಾಬಿನೆಟ್‌ ಸಚಿವ ನವಜೋತ್‌ ಸಿಂಗ್‌ ಸಿಧು ವಿರುದ್ಧ ಕಾಂಗ್ರೆಸ್‌ ಹೈಕಮಾಂಡ್‌, ಲೋಕಸಭಾ ಚುನವಾಣೆ ಫ‌ಲಿತಾಂಶದ ಬಳಿಕ, ಕ್ರಮ ತೆಗೆದುಕೊಳ್ಳುವ ಬಗ್ಗೆ ಚಿಂತನೆ ನಡೆಸುತ್ತಿದೆ.

Advertisement

ಪಂಜಾಬ್‌ ಸಿಎಂ ವಿರುದ್ಧದ ಸಿಧು ಹೇಳಿಕೆಗಳನ್ನು ಪಕ್ಷದ ಹೈಕಮಾಂಡ್‌ ಗಂಭೀರವಾಗಿ ಪರಿಗಣಿಸಿದೆ. ಆದುದರಿಂದ ಸಿಧು ಅವರಿಂದಲೇ ಮೊದಲಾಗಿ ವರದಿಯನ್ನು ಕೇಳಲು ಕಾಂಗ್ರೆಸ್‌ ಹೈಕಮಾಂಡ್‌ ನಿರ್ಧರಿಸಿರುವುದಾಗಿ ಮೂಲಗಳು ತಿಳಿಸಿವೆ.

ಲೋಕಸಭಾ ಚುನಾವಣೆ ಫ‌ಲಿತಾಂಶಗಳ ಬಳಿಕ ಸಿಧು ವಿರುದ್ಧ ಕ್ರಮ ತೆಗೆದುಕೊಳ್ಳುವ ಮುನ್ನ ಪಂಜಾಬ್‌ ಕಾಂಗ್ರೆಸ್‌ ಅಧ್ಯಕ್ಷ ಸುನೀಲ್‌ ಜಾಖಡ್‌ ಅವರಿಂದ ಪಕ್ಷದ ಹೈಕಮಾಂಡ್‌ ವರದಿ ಕೇಳಲಿದೆ ಎಂದೂ ಮೂಲಗಳು ತಿಳಿಸಿವೆ.

Advertisement

Udayavani is now on Telegram. Click here to join our channel and stay updated with the latest news.

Next