Advertisement

Congress; ಮೂರಲ್ಲ ಕನಿಷ್ಠ 6 ಡಿಸಿಎಂ ಬೇಕು : ಶಾಸಕ ಬಸವರಾಜ ರಾಯರೆಡ್ಡಿ ಶಾಕ್

10:10 PM Sep 23, 2023 | Team Udayavani |

ಬೆಂಗಳೂರು: ‘ಕರ್ನಾಟಕದಲ್ಲಿ ಕನಿಷ್ಠ ಆರು ಮಂದಿ ಉಪಮುಖ್ಯಮಂತ್ರಿಗಳನ್ನು ನೇಮಿಸಬೇಕು’ ಎಂದು ಕಾಂಗ್ರೆಸ್ ಹಿರಿಯ ಶಾಸಕ ಬಸವರಾಜ ರಾಯರೆಡ್ಡಿ ಹೇಳಿ ಪಕ್ಷಕ್ಕೆ ಶಾಕ್ ನೀಡಿದ್ದಾರೆ.

Advertisement

ಮೂವರು ಡಿಸಿಎಂ ಬೇಕು ಎಂಬ ಸಚಿವ ಕೆ.ಎನ್. ರಾಜಣ್ಣ ಅವರ ಹೇಳಿಕೆ ಕಾಂಗ್ರೆಸ್ ನಲ್ಲಿ ಚರ್ಚೆ ಹುಟ್ಟು ಹಾಕಿರುವ ಬೆನ್ನಲ್ಲೇ ರಾಯರೆಡ್ಡಿ ಈ ಹೇಳಿಕೆ ನೀಡಿದ್ದಾರೆ.

‘ಕರ್ನಾಟಕದಲ್ಲಿ ಮುಂಬರುವ ಲೋಕಸಭಾ ಚುನಾವಣೆಯ ಹಿತಾಸಕ್ತಿಯಿಂದ ಇನ್ನೂ ಕೆಲವು ಉಪಮುಖ್ಯಮಂತ್ರಿ ಹುದ್ದೆಗಳನ್ನು ಸೃಷ್ಟಿಸುವ ಕುರಿತು ಚರ್ಚೆ ನಡೆಯುತ್ತಿದೆ. ಸಹಕಾರಿ ಸಚಿವರಾಗಿರುವ ರಾಜಣ್ಣ ಅವರು ಈ ಚರ್ಚೆಗೆ ನಾಂದಿ ಹಾಡಿದ್ದಾರೆ. ಇದಕ್ಕೆ ಡಾ.ಪರಮೇಶ್ವರ್, ಎಂ.ಬಿ.ಪಾಟೀಲ್ ಅವರಂತಹ ಹಲವು ಹಿರಿಯ ಸಚಿವರು ಬೆಂಬಲ ನೀಡಿದ್ದಾರೆ. ಉತ್ತಮ ಆಡಳಿತಕ್ಕೆ ಹೆಚ್ಚಿನ ಡಿ.ಸಿ.ಎಂ.ಗಳು ಬೇಕು ಎಂಬ ರಾಜಣ್ಣನವರ ಪ್ರಸ್ತಾವನೆಗೆ ನನ್ನ ಸಹಮತವಿದೆ.ಕನಿಷ್ಠ ಆರು ಮಂದಿ ಡಿ.ಸಿ.ಎಂ.ಗಳಾದರೂ ಇರಬೇಕು ಎಂದು ಸೂಚಿಸುತ್ತೇನೆ ಎಂದರು.

ಆಂಧ್ರಪ್ರದೇಶದಲ್ಲಿ ಈಗಾಗಲೇ ಐವರು ಡಿ.ಸಿ.ಎಂ.ಗಳಿದ್ದಾರೆ.ಕರ್ನಾಟಕ ದೊಡ್ಡ ರಾಜ್ಯವಾಗಿದೆ.ಇನ್ನೂ ಐವರನ್ನು ಡಿಸಿಎಂ ಮಾಡಬಹುದು. ಅಂದರೆ ಈಗಿನ ಡಿಸಿಎಂ ಡಿಕೆ ಶಿವಕುಮಾರ್ ಸೇರಿದಂತೆ ಅದು ಆರು ಡಿಸಿಎಂ ಆಗಲಿದ್ದಾರೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next