Advertisement

Congress: ನೂರು ಕಾನೂನು ಮಾಡಿ,ನಾನು ಅಂಜಲ್ಲ: ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್

07:40 PM Sep 15, 2024 | Poornashri K |

ವಿಜಯಪುರ: ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಬಗ್ಗೆ ಮಾತನಾಡಿರುವ ಕುರಿತಾಗಿ ಕಾನೂನು ಕ್ರಮ ಕೈಗೊಳ್ಳುತ್ತೇವೆ ಎನ್ನುವ ಸಚಿವ ಎಂ.ಬಿ.ಪಾಟೀಲ್‌ ಅವರು ನೂರು ಕಾನೂನು ಮಾಡಲಿ. ನಾನು ಯಾರಿಗೂ ಅಂಜಲ್ಲ. ಎಂತೆಂತಹ ಮಹಾ ನಾಯಕರಿಗೆ ಅಂಜಿಲ್ಲ. ನಮ್ಮ ಪಕ್ಷದ ಮಹಾ ನಾಯಕರಿಗೂ ಅಂಜಿಲ್ಲ. ಇವರ್ಯಾರು ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್ ಹೇಳಿದರು.

Advertisement

ಸುದ್ದಿಗಾರರ ಜತೆ ಮಾತನಾಡಿದ ಅವರು, ಎಂ.ಬಿ.ಪಾಟೀಲರ ಹಿಂದೆ ಒಬ್ಬ ಸೂಫಿಸಂತ, ಮಹಾನ್‌ ದಾರ್ಶನಿಕನಿದ್ದಾನೆ. ಲಿಂಗಾಯತರು-ಮುಸ್ಲಿಮರು ಒಂದು, ಅವರ ನಮ್ಮ ಅಚರಣೆಗಳು ಒಂದು ಎಂದು ಹೇಳುತ್ತಾರೆ. ಲಿಂಗಾಯತರು, ಮುಸ್ಲಿಮರು ಯಾವಾಗ ಒಂದಾಗಲು ಸಾಧ್ಯವಾಗುತ್ತದೆ? ಲಿಂಗಾಯತರಿರಲಿ, ವೀರಶೈವರಿರಲಿ ಎಲ್ಲರೂ ಸನಾತನ ಹಿಂದೂ ಧರ್ಮದ ಭಾಗನೇ ಎದರು.

Advertisement

Udayavani is now on Telegram. Click here to join our channel and stay updated with the latest news.

Next