Advertisement

Ram Rahim; ಡೇರಾ ಮುಖ್ಯಸ್ಥನಿಗೆ ಪರೋಲ್‌ ಪ್ರಶ್ನಿಸಿ ಚು. ಆಯೋಗಕ್ಕೆ “ಕೈ’ ಪತ್ರ!

11:16 PM Oct 01, 2024 | Team Udayavani |

ಚಂಡೀಗಢ: ಅತ್ಯಾಚಾರ ಪ್ರಕರಣದ ಆರೋಪಿ, ಡೇರಾ ಸಚ್ಚಾ ಸೌಧದ ಮುಖ್ಯಸ್ಥ ಗುರುಮೀತ್‌ ರಾಮ್‌ ರಹೀಮ್‌ ಸಿಂಗ್‌ಗೆ ಪೆರೋಲ್‌ ನೀಡುವ ವಿಚಾರದ ಕುರಿತು ಹರ್ಯಾಣ ಪ್ರದೇಶ ಕಾಂಗ್ರೆಸ್‌ ಸಮಿತಿ ಮಂಗಳವಾರ ಟೀಕಿಸಿದೆ. ಜತೆಗೆ ಮುಖ್ಯ ಚುನಾವಣಾ ಆಯುಕ್ತರಿಗೂ ಪತ್ರ ಬರೆದಿದೆ.

Advertisement

“ರಾಜ್ಯದಲ್ಲಿ ಚುನಾವಣೆ ಹೊಸ್ತಿಲಿನಲ್ಲಿರುವಂತೆಯೇ ರಾಮ್‌ ರಹೀಮ್‌ಗೆ ಪೆರೋಲ್‌ ನೀಡುವುದು ಮಾದರಿ ನೀತಿ ಸಂಹಿತೆಯ ಉಲ್ಲಂಘನೆಯಾಗುತ್ತದೆ’ ಎಂದು ಆರೋಪಿಸಿದೆ.

ಹರ್ಯಾಣ, ಉತ್ತರ ಪ್ರದೇಶ ಮತ್ತು ಪಂಜಾಬ್‌ನಲ್ಲಿ ರಾಮ್‌ ರಹೀಮ್‌ ಅವರ ಹಿಂಬಾಲಕರ ಸಂಖ್ಯೆಯೂ ಹೆಚ್ಚಿದೆ. ಈ ನಡುವೆ, ಹರ್ಯಾಣ ಸರ್ಕಾರದಿಂದ ರಾಮ್‌ ರಹೀಮ್‌ ಸಿಂಗ್‌ಗೆ ಪರೋಲ್‌ ನೀಡಿದ್ದು, 4 ವರ್ಷಗಳಲ್ಲಿ 15ನೇ ಬಾರಿ ಪರೋಲ್‌ ಸಿಕ್ಕಿದಂತಾಗುತ್ತದೆ.

Advertisement

Udayavani is now on Telegram. Click here to join our channel and stay updated with the latest news.

Next