Advertisement

ರಾಜೀನಾಮೆ ಸಂದರ್ಭದಲ್ಲಿ ಮಲಗಿದ್ದ “ಕೈ’ನಾಯಕರು

07:20 AM Jul 11, 2019 | Lakshmi GovindaRaj |

ಬೆಂಗಳೂರು: ವಿಧಾನಸೌಧದಲ್ಲಿ ತಮ್ಮ ಪಕ್ಷದ ಶಾಸಕರ ರಾಜೀನಾಮೆ ಪ್ರಹಸನ ನಡೆಯುತ್ತಿದ್ದರೆ, ಮೈತ್ರಿ ಸರ್ಕಾರವನ್ನು ಉಳಿಸಿಕೊಳ್ಳಲು ಆಗಮಿಸಿರುವ ಎಐಸಿಸಿ ನಾಯಕರಿಬ್ಬರೂ ಸರ್ಕಾರಿ ಗೆಸ್ಟ್‌ ಹೌಸ್‌ನಲ್ಲಿ ಭರ್ಜರಿ ನಿದ್ದೆ ಮಾಡುತ್ತಿದ್ದರು ಎಂದು ತಿಳಿದು ಬಂದಿದೆ.

Advertisement

ಬಿಜೆಪಿ ವಿರುದ್ಧ ಪ್ರತಿಭಟನೆ ನಡೆಸಿ, ಮಧ್ಯಾಹ್ನ ಮೂರುಗಂಟೆ ಹೊತ್ತಿಗೆ ಕೆ.ಕೆ.ಗೆಸ್ಟ್‌ ಹೌಸ್‌ಗೆ ತೆರಳಿದ ಕೆ.ಸಿ.ವೇಣುಗೋಪಾಲ್‌ ಮತ್ತು ಗುಲಾಂ ನಬೀ ಆಜಾದ್‌ ಊಟ ಮಾಡಿ ವಿಶ್ರಾಂತಿ ಪಡೆಯಲು ನಿದ್ದೆಗೆ ಜಾರಿದ್ದರು. ಇತ್ತ ವಿಧಾನಸೌಧದಲ್ಲಿ ಡಾ.ಸುಧಾಕರ್‌ ರಾಜೀನಾಮೆ ವಿಷಯವಾಗಿ ಬಿಜೆಪಿ ಹಾಗೂ ಕಾಂಗ್ರೆಸ್‌ ಶಾಸಕರುಗಳ ನಡುವೆ ಹೈ ಡ್ರಾಮಾ ನಡೆದ ನಂತರ ಇಬ್ಬರೂ ರಾಷ್ಟ್ರೀಯ ನಾಯಕರು ನಿದ್ದೆಯಿಂದ ಎದ್ದು ಮಾಹಿತಿ ಪಡೆದುಕೊಂಡರು ಎಂದು ಹೇಳಲಾಗುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next