Advertisement

ಚಿಕ್ಕಮಗಳೂರು: ಮೋಟಮ್ಮ ಪುತ್ರಿಗೆ ಕೈ ಟಿಕೆಟ್‌ ನೀಡಿದ್ದಕ್ಕೆ ಮುಖಂಡರ ಆಕ್ರೋಶ

11:20 AM Nov 02, 2022 | Team Udayavani |

ಚಿಕ್ಕಮಗಳೂರು: ನಯನ ಮೋಟಮ್ಮಗೆ ಟಿಕೆಟ್ ನೀಡಿದ್ದಂತೆ ಸಭೆ ಸೇರಿ ನಯನ ಮೋಟಮ್ಮ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಆ ಮೂಲಕ ಮೂಡಿಗೆರೆ ಕಾಂಗ್ರೆಸ್ ನಲ್ಲಿ ಭಿನ್ನಮತ ಸ್ಫೋಟ ಉಂಟಾಗಿದೆ.

Advertisement

ಮುಂಬರುವ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಮೋಟಮ್ಮ ಕುಟುಂಬಕ್ಕೆ ಬೇಡವೆಂದು ಆಗ್ರಹಿಸಿ ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ವಿಧಾನಸಭಾ ಕ್ಷೇತ್ರದ ವಸ್ತಾರೆಯಲ್ಲಿ ಕಾಂಗ್ರೆಸ್‌ ಮುಖಂಡರು ಸಭೆ ಸೇರಿ ಮಾಜಿ ಸಚಿವೆ ಮೋಟಮ್ಮ ಪುತ್ರಿ ನಯನ ಮೋಟಮ್ಮ ವಿರುದ್ದ ಆಕ್ರೋಶ ಹೊರ ಹಾಕಿದ್ದಾರೆ.

ನಯನ ಮೋಟಮ್ಮಗೆ  ಟಿಕೆಟ್  ನೀಡಿದರೆ ಕೈ ಅಭ್ಯರ್ಥಿ ಸೋಲು ಖಚಿತವಾಗುತ್ತದೆ ಎನ್ನುವುದು ಅಸಮಾಧಾನಗೊಂಡ ಮುಖಂಡರ ವಾದ. ಮುಂದಿನ ದಿನಗಳಲ್ಲಿ  ನಯನ ಮೋಟಮ್ಮಗೆ ಟಿಕೆಟ್ ನೀಡದಂತೆ ಕೆಪಿಸಿಸಿಗೆ ಮನವಿ ಜಿಲ್ಲಾ ಮುಖಂಡರು ಮನವಿ ಮಾಡಲಿದ್ದಾರೆ ಎಂದು ತಿಳಿದು ಬಂದಿದೆ.

ಮಾಜಿ ಜಿ.ಪಂ ಸದಸ್ಯರು, ಗ್ರಾ.ಪಂ ಸದಸ್ಯರು ಸಭೆಯಲ್ಲಿ ಭಾಗಿಯಾಗಿದ್ದರು.

 

Advertisement

 

Advertisement

Udayavani is now on Telegram. Click here to join our channel and stay updated with the latest news.

Next