Advertisement

ಡೈರಿ ಗುಮ್ಮಕ್ಕೆ “ಕೈ”ನಾಯಕರಿಂದ ಸೀಡಿ ಬ್ಲಾಸ್ಟ್! BSY ಬಂಡವಾಳ ಬಯಲು

03:02 PM Feb 13, 2017 | Sharanya Alva |

ಬೆಂಗಳೂರು:ಕಾಂಗ್ರೆಸ್ ಹೈಕಮಾಂಡ್ ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಒಂದು ಸಾವಿರ ಕೋಟಿ ರೂಪಾಯಿ ಕಪ್ಪ ಕೊಟ್ಟಿದ್ದಾರೆ, ಉಕ್ಕಿನ ಮೇಲ್ಸೆತುಗಾಗಿ 150 ಕೋಟಿ ರೂಪಾಯಿ ಕಮಿಷನ್ ಪಡೆದಿದ್ದಾರೆ ಎಂಬ ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ಬಾಂಬ್ ಗೆ ಕಾಂಗ್ರೆಸ್ ಮುಖಂಡರು ವಿಧಾನಸೌಧದಲ್ಲಿ ಬಿಎಸ್ ವೈ ಮತ್ತು ಅನಂತ್ ಕುಮಾರ್ ಸಂಭಾಷಣೆಯ ಸೀಡಿಯನ್ನು ರಿಲೀಸ್ ಮಾಡುವ ಮೂಲಕ ತಿರುಗೇಟು ನೀಡಿದ್ದಾರೆ.

Advertisement

ಮಂಗಳವಾರ ವಿಧಾನಸೌಧದಲ್ಲಿ ಕಾಂಗ್ರೆಸ್ ಮುಖಂಡರಾದ ವಿಎಸ್ ಉಗ್ರಪ್ಪ, ಬಿಎಸ್ ಯಡಿಯೂರಪ್ಪ ಹಾಗೂ ಕೇಂದ್ರ ಸಚಿವ ಅನಂತ ಕುಮಾರ್ ಸಂಭಾಷಣೆಯ ಸೀಡಿ ಬಿಡುಗಡೆ ಮಾಡಿದ್ದಾರೆ. ಯಡಿಯೂರಪ್ಪ ಮತ್ತು ಅನಂತ್ ಕುಮಾರ್ ಷಡ್ಯಂತ್ರದಿಂದ ಈ ಡೈರಿ ಸಿಕ್ಕಿದೆ ಎಂದು ಕಥೆ ಹೆಣೆದು ಸಿಎಂ ಸಿದ್ದರಾಮಯ್ಯ ಅವರು ವಿರುದ್ಧ ಆರೋಪಿಸಿರುವುದಾಗಿ ಕಾಂಗ್ರೆಸ್ ಮುಖಂಡರು ದೂರಿದ್ದಾರೆ.

ಸಂಭಾಷಣೆಯಲ್ಲಿ ಏನಿದೆ?

ಅನಂತ ಕುಮಾರ್: ನೀವಿದ್ದಾಗಲೂ ಕೇಂದ್ರಕ್ಕೆ ದುಡ್ಡು ಕೊಟ್ಟಿದ್ದೀರಿ.
ಬಿಎಸ್ ವೈ: ನಾನ್ ಕೊಟ್ಟಿದ್ದೀನಿ, ನಾನ್ ಕೊಟ್ಟಿಲ್ಲ ಅಂತ ಎಲ್ಲಿ ಹೇಳಿದ್ದೀನಿ
ಅನಂತಕುಮಾರ್; ನೀವ್ ಕೊಟ್ಟಿದ್ದೀರಿ ಎಷ್ಟು ಕೊಟ್ಟಿದ್ದಾರೆ ಅಂತ ಹೇಳ್ತಾರಾ? ನಾನು ಕೊಟ್ಟಿಲ್ಲ ಅಂತ ಹೇಳ್ತಿಲ್ಲ
ಅನಂತ್ ಕುಮಾರ್; ಯಡಿಯೂರಪ್ಪ ಕೊಟ್ಟಿರ್ತಾರೆ, ಅದನ್ನು ಬರೆದುಕೊಂಡಿರ್ತಾರಾ?
ಅನಂತಕುಮಾರ್: ಆದ್ರೆ ಕಾಂಗ್ರೆಸ್ ಸಾವಿರ ಕೋಟಿ ಕೊಟ್ಟಿದೆ ಅಂದ್ರೆ ಒಪ್ಪಿಕೊಳ್ಳಲ್ಲ. ನೀವು ಕಲ್ಲು ಬೀಸಿದ್ರೆ ಹೊತ್ತಿಕೊಳ್ಳುತ್ತೆ. ನಾವು ಮಾತ್ರ ಕಾಂಗ್ರೆಸ್ ಮುಖಂಡರು ಸಾವಿರ ಕೋಟಿ ಕೊಟ್ಟಿದ್ದಾರೆ ಅಂತ ಹೇಳೋಣಾ.
ಬಿಎಸ್ ವೈ:ಡೈರಿ ಈಚೆಗೆ ಬಂದಿಲ್ಲವಲ್ಲಾ
ಅನಂತಕುಮಾರ್: ಎಲೆಕ್ಷನ್ ತನಕ ಉತ್ತರ ಕೊಟ್ಟುಕೊಳ್ಳುತ್ತಾ ತಿರುಗಾಡಲಿ

ಕಾಂಗ್ರೆಸ್ ಸೀಡಿ ಆರೋಪಕ್ಕೆ ಬಿಜೆಪಿ ಸ್ಪಷ್ಟನೆ:
ಕಾಂಗ್ರೆಸ್ ಮುಖಂಡರೊಬ್ಬರು ಅನಂತ್ ಕುಮಾರ್ ಕರೆ ಮಾಡಿದ್ದರು. ಅನಂತಕುಮಾರ್ ಬಿಎಸ್ ವೈ ಜೊತೆ ಮಾತನಾಡಿದ್ದು ಕಾಂಗ್ರೆಸ್ ಮುಖಂಡ ಹೇಳಿದ ವಿಚಾರಗಳನ್ನೇ ಹೊರತು, ಅವರಿಬ್ಬರ ನಡುವಿನ ಸಂಭಾಷಣೆ ಅಲ್ಲ ಎಂದು ಬಿಜೆಪಿ ಮುಖಂಡ ಗೋ.ಮಧುಸೂದನ್ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಸ್ಪಷ್ಟನೆ ನೀಡಿದ್ದಾರೆ. ಇದನ್ನೇ ರೆಕಾರ್ಡ್ ಮಾಡಿ ಕಾಂಗ್ರೆಸ್ ಮುಖಂಡರು ಸೀಡಿ ರೂಪದಲ್ಲಿ ಬಿಡುಗಡೆ ಮಾಡಿದ್ದಾರೆ ಎಂದು ಆರೋಪಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next