Advertisement

ಕಾಂಗ್ರೆಸ್‌ನಲ್ಲಿದೆ ವಂಶಪಾರಂಪರಿಕ ಆಡಳಿತ

11:40 AM Jun 30, 2019 | Team Udayavani |

ಹಾವೇರಿ: ಬಿಜೆಪಿಯಲ್ಲಿ ಆಂತರಿಕ ಪ್ರಜಾಪ್ರಭುತ್ವ ಗಟ್ಟಿಯಾಗಿದೆ. ಹೀಗಾಗಿಯೇ ಚಹಾ ಮಾರುತ್ತಿದ್ದ ಮೋದಿಯವರು ದೇಶದ ಪ್ರಧಾನಿಯಾಗಿದ್ದಾರೆ ಎಂದು ಶಾಸಕ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದರು.

Advertisement

ನಗರದಲ್ಲಿ ಶನಿವಾರ ನಡೆದ ಬಿಜೆಪಿ ಸದಸ್ಯತ್ವ ಅಭಿಯಾನದ ಪೂರ್ವ ಸಿದ್ಧತಾ ಸಭೆ ಉದ್ಘಾಟಿಸಿ ಮಾತನಾಡಿದ ಅವರು, ಬಿಜೆಪಿ ಸಂವಿಧಾನ ಬದ್ಧವಾಗಿ ಆಡಳಿತ ನಡೆಸುತ್ತಿದೆ. ರಾಷ್ಟ್ರೀಯ, ಪ್ರಾದೇಶಿಕ ಪಕ್ಷಗಳಲ್ಲಿ ಇದನ್ನು ಕಾಣಲು ಸಾಧ್ಯವಿಲ್ಲ, ವಂಶಪಾರಂಪರಿಕ ಆಡಳಿತಕ್ಕೆ ಜಗತ್ತಿಗೆ ಕಾಂಗ್ರೆಸ್‌ ಉತ್ತಮ ಉದಾಹರಣೆಯಾಗಿದೆ ಎಂದರು.

ದೇಶದ ಉಳಿದೆಲ್ಲ ಪಕ್ಷಗಳಿಗಿಂತ ಬಿಜೆಪಿ ವಿಭಿನ್ನ ಹಾಗೂ ವಿಶಿಷ್ಟವಾಗಿದೆ. ಪಕ್ಷ ನಿಗದಿಪಡಿಸಿದ ಗುರಿಯಂತೆ ಹೆಚ್ಚು ಸದಸ್ಯತ್ವ ಮಾಡಿದ ಹೆಗ್ಗಳಿಕೆಗೆ ಹಾವೇರಿ ಜಿಲ್ಲೆ ಪಾತ್ರವಾಗಬೇಕು. ಕಳೆದ ಬಾರಿ ಜಿಲ್ಲೆಯಲ್ಲಿ 1.30ಲಕ್ಷ ಸದಸ್ಯರಾಗಿದ್ದರು. ಈ ಬಾರಿ 2ಲಕ್ಷ ಸದಸ್ಯರನ್ನು ಮಾಡುವ ಗುರಿ ಹೊಂದಲಾಗಿದ್ದು ಜು. 6ರಿಂದ ಆಗಸ್ಟ್‌ 11ರ ವರೆಗೆ ನಡೆಯುವ ಈ ಸದಸ್ಯತ್ವ ಅಭಿಯಾನದಲ್ಲಿ 8980808080 ಸಂಖ್ಯೆಗೆ ಮಿಸ್‌ಕಾಲ್ ಕೊಡುವ ಮೂಲಕ ಹೊಸ ಸದಸ್ಯರನ್ನು ಮಾಡಬೇಕು. ಜೊತೆಗೆ ಹಿಂದಿನ ಸದಸ್ಯರೂ ಸಹ ಮತ್ತೂಮ್ಮೆ ಮಿಸ್‌ಕಾಲ್ ಕೊಟ್ಟು ದೃಢಿಕರಿಸಿಕೊಳ್ಳಬೇಕು ಎಂದರು.

ಮಾಜಿ ಸಚಿವ, ಶಾಸಕ ಸಿ.ಎಂ. ಉದಾಸಿ ಮಾತನಾಡಿ, ಕಿಸಾನ್‌ ಸನ್ಮಾನ್‌ ಯೋಜನೆ ಎಲ್ಲ ರೈತರಿಗೂ ವಿಸ್ತರಣೆಯಾಗಿದ್ದು, ಕೇಂದ್ರದ ಎಲ್ಲ ಯೋಜನೆಗಳನ್ನು ಜನರಿಗೆ ತಿಳಿವಳಿಕೆ ನೀಡಿ ಸದಸ್ಯತ್ವ ಮಾಡಿಸಬೇಕು. ಯಾವ ಮತಗಟ್ಟೆಯಲ್ಲಿ ಕಡಿಮೆ ಮತ ಬಂದಿವೆಯೋ ಅಲ್ಲೇ ಹೆಚ್ಚು ಸದಸ್ಯರನ್ನಾಗಿ ಮಾಡಬೇಕು ಎಂದರು.

ಮಾಜಿ ಸಚಿವ, ಶಾಸಕ ಬಸವರಾಜ ಬೊಮ್ಮಾಯಿ ಮಾತನಾಡಿ, ಸದಸ್ಯತ್ವ ಅಭಿಯಾನ ನಿರಂತರ ಪ್ರಕ್ರಿಯೆ ಚುನಾವಣೆಗೂ ಅದಕ್ಕೂ ಸಂಬಂಧ ಇಲ್ಲ, ಹೊಸ ತಂತ್ರಜ್ಞಾನ ಬಳಸಿಕೊಂಡು ಹೆಚ್ಚಿನ ಸದಸ್ಯತ್ವವನ್ನು ಮಾಡಬೇಕು. ಪಕ್ಷಕ್ಕೆ ಬಲಿಷ್ಠ ನಾಯಕತ್ವವಿದೆ. ಪಕ್ಷದ ಕೆಲಸಕ್ಕೆ ಸ್ವಲ್ಪ ನೀಡಿ ಗುರಿ ತಲುಪಬೇಕು. ದೇಶದಲ್ಲಿ ಬಿಜೆಪಿ ಸದಸ್ಯರ ಸಂಖ್ಯೆ ಹೆಚ್ಚಿದೆ. ಈಗ ಮತ್ತಷ್ಟು ಹೆಚ್ಚಿಸಬೇಕಿದೆ. ಗುಣಾತ್ಮಕವಾಗಿ ಮಾದರಿ ಸದಸ್ಯತ್ವ ಮಾಡಿ ಯಶಸ್ವಿಗೊಳಿಸೋಣ ಎಂದರು.

Advertisement

ಸಂಸದ ಶಿವಕುಮಾರ ಉದಾಸಿ ಮಾತನಾಡಿ, ಪ್ರಧಾನಿ ನರೇಂದ್ರ ಮೋದಿಯವರ ಅಲೆ ಮತಗಳಾಗಿ ಪರಿವರ್ತನೆ ಆಗಬೇಕಾದರೆ ಬೂತ್‌ ಮಟ್ಟದಲ್ಲಿ ಸದಸ್ಯತ್ವ ಅವಶ್ಯ. ಚುನಾವಣೆ ಮುಗಿದ 15ದಿನಗಳಲ್ಲೇ ಗೆದ್ದ ಪಕ್ಷ ಸದಸ್ಯತ್ವ ಮಾಡಿಸುತ್ತಿರುವುದು ಇತಿಹಾಸದಲ್ಲೇ ಮೊದಲು. ಕೇಂದ್ರ ಸರ್ಕಾರದ ಲಾಭ ಪಡೆದವರು, ‘ಸಿ’ ಬೂತ್‌ ಸೇರಿದಂತೆ ಸರ್ವರನ್ನೂ ಒಳಗೊಂಡು ಹೆಚ್ಚು ಸದಸ್ಯತ್ವ ಮಾಡಿಸಿದರೆ ಮುಂಬರುವ ಎಲ್ಲ ಚುನಾವಣೆಗಳಲ್ಲೂ ಅನುಕೂಲ ಆಗುತ್ತದೆ ಎಂದರು.

ಮಾಜಿ ಶಾಸಕ ಯು.ಬಿ. ಬಣಕಾರ ಮಾತನಾಡಿ, ಸದಸ್ಯತ್ವ ಅಭಿಯಾನದ ಮೂಲಕ ಕೇಂದ್ರ ಸರ್ಕಾರದ ಸಾಧನೆಗಳನ್ನು ಜನರಿಗೆ ಮುಟ್ಟಿಸಲು ಸಹಕಾರಿಯಾಗುತ್ತದೆ. ಪಕ್ಷ ನಿಗದಿಪಡಿಸಿರುವ ಗುರಿ ತಲುಪಲು ಕಾರ್ಯಕರ್ತರು ಶ್ರಮಿಸಬೇಕು ಎಂದರು.

ಬಿಜೆಪಿ ಜಿಲ್ಲಾಧ್ಯಕ್ಷ ಶಿವರಾಜ ಸಜ್ಜನರ, ಮಾಜಿ ಸಂಸದ ಮಂಜುನಾಥ ಕುನ್ನೂರ, ಮಾಜಿ ವಿಪ ಸದಸ್ಯ ಡಿ.ಎಂ. ಸಾಲಿ, ರಾಜ್ಯ ಉಪಾಧ್ಯಕ್ಷ ಎಂ. ನಾಗರಾಜ, ರಾಜೇಂದ್ರ ಸಜ್ಜನರ, ಭೋಜರಾಜ ಕರೂದಿ, ಲಿಂಗರಾಜ ಚಪ್ಪರದಹಳ್ಳಿ, ಸಿದ್ದರಾಜ ಕಲಕೋಟಿ ಸಭೆಯಲ್ಲಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next