Advertisement

ಕಾಂಗ್ರೆಸ್‌ ನೆಲ ಕಚ್ಚುವುದು ಖಚಿತ : ಬಿನೋಯ್‌ ವಿಶ್ವಂ

10:43 AM Mar 31, 2021 | Team Udayavani |

ಕಾಸರಗೋಡು: ಮಾಜಿ ಕೇಂದ್ರ ಸಚಿವ, ಹಿರಿಯ ಮುಖಂಡರಾದ ಎ.ಕೆ.ಆ್ಯಂಟನಿ ಸಹಿತ ಕಾಂಗ್ರೆಸ್‌ ಮುಖಂಡರು ಬಿಜೆಪಿ ಬಗ್ಗೆ ಮೃದು ಧೋರಣೆಯಿಂದಾಗಿ ಮುಂದಿನ ದಿನಗಳಲ್ಲಿ ಕೇರಳದಲ್ಲಿ ಕಾಂಗ್ರೆಸ್‌ ಪಕ್ಷ ನೆಲಕಚ್ಚುವುದು ಖಚಿತ ಎಂದು ಸಿ.ಪಿ.ಐ. ಕೇಂದ್ರ ಸೆಕ್ರೆಟರಿಯೇಟ್‌ ಸದಸ್ಯ ಬಿನೋಯ್‌ ವಿಶ್ವಂ ಹೇಳಿದರು.

Advertisement

ಅವರು ಕಾಸರಗೋಡು ಪ್ರಸ್‌ ಕ್ಲಬ್‌ನಲ್ಲಿ ಆಯೋಜಿಸಿದ ಪಂಚಸಭಾ ಕಾರ್ಯಕ್ರಮದಲ್ಲಿ ಮಾತನಾಡಿದರು. ಕಾಂಗ್ರೆಸ್‌ ಪಕ್ಷ ನೆಹರೂ ಹಾದಿಯನ್ನು ತೊರೆದು ಬಿಜೆಪಿ ಹಾದಿಯಲ್ಲಿ ಸಾಗಲು ಕಾಂಗ್ರೆಸ್‌ನ ಕೆಲವು ನೇತಾರರು ಪ್ರಯತ್ನಿಸುತ್ತಿದ್ದಾರೆ.

ಎ.ಕೆ.ಆ್ಯಂಟನಿಯಂತ ಹಿರಿಯ ಮುಖಂಡರು ಎಡರಂಗವನ್ನು ವಿರೋಧಿಸುತ್ತಲೇ ಬಂದಿದ್ದಾರೆ. ಇವರೆಲ್ಲ ಗಾಂಧಿ, ನೆಹರೂ ಮೊದಲಾದವರನ್ನು ಮರೆತು ಕಾರ್ಯಾಚರಿಸುತ್ತಿದ್ದಾರೆ. ಇದು ನಿಸ್ವಾರ್ಥ ಕಾಂಗ್ರೆಸ್‌ ಕಾರ್ಯಕರ್ತರಿಗೆ ಇರಿಸು ಮುರಿಸನ್ನುಂಟು ಮಾಡುತ್ತಿದೆ ಎಂದು ಅಭಿಪ್ರಾಯಪಟ್ಟರು.

ಕಾರ್ಯಕ್ರಮದಲ್ಲಿ ಸಿಪಿಐ ರಾಜ್ಯ ಸಮಿತಿ ಸದಸ್ಯ ಟಿ.ಕೃಷ್ಣನ್‌, ಜಿಲ್ಲಾ ಕಾರ್ಯದರ್ಶಿ ಗೋವಿಂದನ್‌ ಪಳ್ಳಿಕಾಪ್ಪಿಲ್‌ ಉಪಸ್ಥಿತರಿದ್ದರು. ಪ್ರಸ್‌ ಕ್ಲಬ್‌ ಅಧ್ಯಕ್ಷ ಮುಹಮ್ಮದ್‌ ಹಾಶೀಂ ಅಧ್ಯಕ್ಷತೆ ವಹಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next