Advertisement

ಕಾಂಗ್ರೆಸ್- ಜೆಡಿಎಸ್ ಗೊಂದಲವಿಲ್ಲ,ಮಂಡ್ಯದಲ್ಲಿ ಕಾಂಗ್ರೆಸ್ ಪರ ಒಲವಿದೆ

06:51 AM Feb 24, 2019 | |

ಬೆಂಗಳೂರು: ಮುಂಬರುವ ಲೋಕಸಭಾ ಚುಣಾವಣೆಯಲ್ಲಿ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸುವ ಬಗ್ಗೆ ಸುಮಲತಾ ಸುಳಿವು ನೀಡಿದ್ದು, ಮಂಡ್ಯದಲ್ಲಿ ಕಾಂಗ್ರೆಸ್ ಪರ ಒಲವಿದೆ ಎಂದಿದ್ದಾರೆ. 

Advertisement

ಬೆಂಗಳೂರಿನಲ್ಲಿ ದಿವಂಗತ ಪತಿ ಅಂಬರೀಷ್ ಅವರ ಮೂರನೇ ತಿಂಗಳ ಪೂಜೆ ನಡೆಸಿದ ಬಳಿಕ ಮಾತನಾಡಿದ ಸುಮಲತಾ, ಚುಣಾವಣೆಗಾಗಿ ಇದುವರೆಗೆ ಯಾವುದೇ ಯೋಜನೆ ಹಾಕಿಕೊಂಡಿಲ್ಲ. ಮಂಡ್ಯ ಜನರು ಯಾವುದೇ ಪಕ್ಷವಾದರೂ ಸರಿ ನಾನು ಅಲ್ಲಿ ಸ್ಪರ್ಧೆ ಮಾಡಬೇಕೆಂದು ಆಶಿಸುತ್ತಿದ್ದಾರೆ. ನಾನು ಸ್ಪರ್ಧೆ ಮಾಡಬೇಕೆಂದು ಒತ್ತಡವಿದೆ. ಮಂಡ್ಯ ಜನರ ಸೇವೆ ಮಾಡಲು ಚುಣಾವಣೆಗೆ ಸ್ಪರ್ಧೆ ಮಾಡುತ್ತೇನೆ ಎಂದರು. 

ಮಂಡ್ಯದಲ್ಲಿ ಸ್ಪರ್ಧೆ ಮಾಡಲು ಜೆಡಿಎಸ್- ಕಾಂಗ್ರೆಸ್ ಎಂಬ ಗೊಂದಲವಿಲ್ಲ. ಆದರೆ ಅಲ್ಲಿ ಕಾಂಗ್ರೆಸ್ ಪರ ಒಲವಿರುವುದು ನಿಜ ಎಂದರು. 

ಪತಿ ಅಂಬರೀಷ್ ಅವರನ್ನು ನೆನೆದು ಭಾವುಕರಾದ ಸುಮಲತಾ, ಅಂಬಿ ಮಂಡ್ಯ ಜನತೆ ಮೇಲೆ ತುಂಬಾ ಕನಸು ಕಟ್ಟಿದ್ದರು. ಅವರ ಕನಸು ಈಡೇರಿಸಲು ನಾನಿಲ್ಲಿ ಬಂದಿದ್ದೇನೆ ಎಂದರು. 

Advertisement

Udayavani is now on Telegram. Click here to join our channel and stay updated with the latest news.

Next