Advertisement

Congress: “ಹಮ್‌ ತಯ್ನಾರ್‌ ಹೈ” ರ‍್ಯಾಲಿ- ಲೋಕಸಭೆ ಚುನಾವಣೆಯ ಅಧಿಕೃತ ಪ್ರಚಾರಕ್ಕೆ ಚಾಲನೆ

09:19 PM Dec 27, 2023 | Team Udayavani |

ನಾಗ್ಪುರ: ಮುಂಬರುವ ಲೋಕಸಭೆಗಾಗಿ ಮಹಾರಾಷ್ಟ್ರದ ನಾಗ್ಪುರದಿಂದ ಗುರುವಾರ ಪ್ರಚಾರ ರ್ಯಾಲಿ ಆರಂಭಿಸಲಿದೆ. ಪಕ್ಷದ 139ನೇ ಸಂಸ್ಥಾಪಕ ದಿನದ ಅಂಗವಾಗಿ ನಾಗ್ಪುರ ನಗರದಲ್ಲಿ “ಹೈ ತಯ್ನಾರ್‌ ಹಮ್‌'(ನಾವು ಸಿದ್ಧವಾಗಿದ್ದೇವೆ) ಎಂಬ ಮೆಗಾ ರ್ಯಾಲಿಯನ್ನು ಹಮ್ಮಿಕೊಳ್ಳಲು ಕಾಂಗ್ರೆಸ್‌ ನಿರ್ಧರಿಸಿದೆ.

Advertisement

ಈ ಬಗ್ಗೆ ನವದೆಹಲಿಯಲ್ಲಿ ಮಾತನಾಡಿದ ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ಜೈರಾಮ್‌ ರಮೇಶ್‌ ಒಟ್ಟಾರೆ ಕಾರ್ಯಕ್ರಮದ ಬಗ್ಗೆ ಮಾಹಿತಿ ನೀಡಿದ್ದಾರೆ. ರಾಷ್ಟ್ರೀಯ ಸ್ವಯಂ ಸೇವಕ ಸಂಘ(ಆರ್‌ಎಸ್‌ಎಸ್‌)ದ ಪ್ರಧಾನ ಕಚೇರಿ ಹಾಗೂ ಡಾ. ಬಿ.ಆರ್‌.ಅಂಬೇಡ್ಕರ್‌ ಅವರ “ದೀಕ್ಷಭೂಮಿ’ ಇರುವ ನಾಗ್ಪುರದಲ್ಲೇ ಕಾಂಗ್ರೆಸ್‌ ತನ್ನ ಪ್ರಚಾರವನ್ನು ಆರಂಭಿಸುತ್ತಿರುವುದು ವಿಶೇಷ.
“ಕಾಂಗ್ರೆಸ್‌ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಕಾಂಗ್ರೆಸ್‌ ನಾಯಕರಾದ ಸೋನಿಯಾ ಗಾಂಧಿ ಮತ್ತು ರಾಹುಲ್‌ ಗಾಂಧಿ ಅವರು ರ್ಯಾಲಿಯನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ನಾಗ್ಪುರದ ದಿಘೋರಿಯಲ್ಲಿ ನಡೆಯುವ ಈ ರ್ಯಾಲಿಯಲ್ಲಿ ಲಕ್ಷಾಂತರ ಕಾಂಗ್ರೆಸ್‌ ಕಾರ್ಯಕರ್ತರು ಭಾಗವಹಿಸುತ್ತಿದ್ದಾರೆ. ಈ ರ್ಯಾಲಿಯ ಮೂಲಕ ಕಾಂಗ್ರೆಸ್‌ ದೇಶಕ್ಕೆ ಒಳ್ಳೆಯ ಸಂದೇಶವನ್ನು ಕಳುಹಿಸಲಿದೆ’ ಎಂದು ಮಹಾರಾಷ್ಟ್ರ ಕಾಂಗ್ರೆಸ್‌ ಅಧ್ಯಕ್ಷ ನಾನಾ ಪಟೋಲೆ ಹೇಳಿದ್ದಾರೆ.

ತುರ್ತು ಪರಿಸ್ಥಿತಿ ವಾಪಸ್‌ ಪಡೆದ ಬಳಿಕ ದಿ.ಇಂದಿರಾ ಗಾಂಧಿ ಈ ಸ್ಥಳದಲ್ಲಿ ರ್ಯಾಲಿ ನಡೆಸಿದ್ದರು. ಆ ನಂತರ ನಡೆದ ಚುನಾವಣೆಯಲ್ಲಿ ವಿದರ್ಭ ಪ್ರದೇಶ ವ್ಯಾಪ್ತಿಯಲ್ಲಿ ಎಲ್ಲಾ ಸ್ಥಾನಗಳಲ್ಲಿ ಕಾಂಗ್ರೆಸ್‌ ಗೆದ್ದಿತ್ತು ಎಂದು ಪಟೋಲೆ ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next