Advertisement

Politics: ಸರಕಾರವನ್ನು ಬೀಳಿಸುವ ಸಾಮರ್ಥ್ಯ ಕಾಂಗ್ರೆಸ್‌ನವರಿಗೇ ಇದೆ: ಸಿ.ಟಿ. ರವಿ

12:01 AM Oct 20, 2023 | Team Udayavani |

ಚಿಕ್ಕಮಗಳೂರು: ಹಾಲಿನದ್ದು ಹಾಲಿಗೆ, ನೀರಿನದ್ದು ನೀರಿಗೆ. ಉಪ್ಪು ತಿಂದವರು ನೀರು ಕುಡಿಯಲೇಬೇಕು. ಡಿ.ಕೆ.ಶಿವಕುಮಾರ್‌ ಅಕ್ರಮ ಆಸ್ತಿ ಗಳಿಕೆ ಪ್ರಕರಣ ಸಂಬಂಧ ಸಿಬಿಐ ತನಿಖೆಗೆ ಹೈಕೋರ್ಟ್‌ ಆದೇಶ ನೀಡಿದ್ದು ಸರಿಯಾಗಿದೆ ಎಂದು ಮಾಜಿ ಸಚಿವ ಸಿ.ಟಿ.ರವಿ ಹೇಳಿದರು.

Advertisement

ಸುದ್ದಿಗಾರರ ಜತೆ ಮಾತನಾಡಿದ ಅವರು, ತಪ್ಪು ಮಾಡಿದವರಿಗೆ ಶಿಕ್ಷೆ ಆಗಬೇಕು. ಪ್ರಾಮಾಣಿಕರಿಗೆ ತೊಂದರೆ ಆಗಬಾರದು. ಅಕ್ರಮವನ್ನು ಯಾರು ಮಾಡಿದರೂ ಅದು ಇಂದಲ್ಲ ನಾಳೆ ಬಯಲಿಗೆ ಬರುತ್ತದೆ. ಸತ್ಯವನ್ನು ದೀರ್ಘ‌ಕಾಲ ಹೂತು ಹಾಕಲು ಸಾಧ್ಯವಿಲ್ಲ. ಕಾನೂನಿಗಿಂತ ಯಾರೂ ದೊಡ್ಡವರಲ್ಲ. ಡಿ.ಕೆ.ಶಿವಕುಮಾರ್‌ ಬೆಳಗಾವಿಗೆ ಹೋಗಿದ್ದಾಗ, ಅವರನ್ನು ಭೇಟಿಯಾಗಲು ಹೋಗಬೇಡಿ ಎಂದು ಸತೀಶ್‌ ಜಾರಕಿಹೊಳಿಗೆ ನಾವು ಹೇಳಿದ್ದೇವಾ? 20 ಹಿರಿಯ ಶಾಸಕರು ಪತ್ರ ಬರೆದಿದ್ದು, ಅದನ್ನೂ ನಾವು ಹೇಳಿ ಮಾಡಿದ್ದಾ? ಐವರನ್ನು ಡಿಸಿಎಂ ಮಾಡಿ ಅಂತ ಸಚಿವ ರಾಜಣ್ಣರಲ್ಲಿ ನಾವು ಹೇಳಿದ್ದಾ? ಇದನ್ನೆಲ್ಲ ಗಮನಿಸುವಾಗ ರಾಜ್ಯ ಸರಕಾರವನ್ನು ಬೀಳಿಸುವ ತಾಕತ್ತು ಕಾಂಗ್ರೆಸ್‌ನವರಿಗೆ ಮಾತ್ರ ಇದೆ ಎಂದನಿಸುತ್ತಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next