Advertisement

Congress Govt; ಗೃಹಲಕ್ಷ್ಮೀ 2 ಸಾವಿರ ಅಲ್ಲ 4 ಸಾವಿರ ರೂ.ಕೊಡಬಹುದು: ಡಿ.ಕೆ.ಸುರೇಶ್

04:58 PM Feb 29, 2024 | Team Udayavani |

ರಾಮನಗರ: ಸರ್ಕಾರ ದಿವಾಳಿ ಆಗಿದೆ ಅನ್ನೋದು ಸುಳ್ಳು, ನಾವು ನಿಮ್ಮ ತೆರಿಗೆಯನ್ನು ನಿಮಗೆ ಕೊಡುತ್ತಿದ್ದು, ಬಡವರನ್ನ ಮೇಲೆ ತರುವ ಕೆಲಸ ಮಾಡುತ್ತಿದ್ದೇವೆ ಎಂದು ಕಾಂಗ್ರೆಸ್ ಸಂಸದ ಡಿ.ಕೆ.ಸುರೇಶ್ ಗುರುವಾರ ಬಿಜೆಪಿ ಮತ್ತು ಜೆಡಿಎಸ್ ವಿರುದ್ಧ ಕಿಡಿ ಕಾರಿದ್ದಾರೆ.

Advertisement

ಸುದ್ದಿಗಾರರೊಂದಿಗೆ ಮಾತನಾಡಿ, ”ಅಭಿವೃದ್ಧಿ ಇಲ್ಲ ಅಂತ ಕೆಲವರು ಬೊಬ್ಬೆಹೊಡೆಯುತ್ತಿದ್ದಾರೆ. ಮಹಿಳೆಯ ಆರ್ಥಿಕ ಅಭಿವೃದ್ಧಿ ದೇಶದ ಅಭಿವೃದ್ಧಿಗೆ ಪೂರಕ.ಆ ಕೆಲಸವನ್ನ ನಾವು ಮಾಡುತ್ತಿದ್ದೇವೆ.ಕೇಂದ್ರ ಸರ್ಕಾರ ನಮ್ಮ ಪಾಲನ್ನು ಕೊಟ್ಟರೆ ನಾವು ಗೃಹಲಕ್ಷ್ಮೀ ಹಣ ಎರಡು ಸಾವಿರ ಅಲ್ಲ ನಾಲ್ಕು ಸಾವಿರ ಕೊಡಬಹುದು” ಎಂದರು.

”ನನ್ನ ಮೇಲೆ ದೇಶ ವಿಭಜನೆ ಮಾಡುತ್ತಿದ್ದಾರೆ ಎಂದು ದೊಡ್ಡ ಆರೋಪವೊಂದನ್ನ ಮಾಡುತ್ತಿದ್ದಾರೆ. ನಾನು ಕೇಳಿದ್ದು ಕನ್ನಡಿಗರ ಹಣ.ಕರ್ನಾಟಕದ ಬಡವರು, ಕನ್ನಡಿಗರ ಪರವಾಗಿ ನಾನು ಧ್ವನಿ ಎತ್ತಿದ್ದೇನೆ.4ಲಕ್ಷದ 30ಸಾವಿರ ಕೋಟಿ ಹಣ ತೆರಿಗೆ ಕಟ್ಟುತ್ತಿದ್ದೇವೆ.ಆದರೆ ಅವರು ನಮಗೆ ಕೊಡುತ್ತಿರುವುದು ಕೇವಲ 13 ಪರ್ಸೆಂಟ್.ಇದು ಕರ್ನಾಟಕಕ್ಕೆ ಆದ ಅನ್ಯಾಯ ಅಲ್ಲವೇ?” ಎಂದು ಪ್ರಶ್ನಿಸಿದರು.

”ನಾವು 58ಸಾವಿರ ಕೋಟಿಯನ್ನ ಬಡವರಿಗೆ ಕೊಟ್ಟರೆ ಬಾಯಿ ಬಡಿದುಕೊಳ್ಳುತ್ತೀರಿ. ನೀವು ನಮ್ಮ ಹಣವನ್ನ ಉತ್ತರ ಪ್ರದೇಶಕ್ಕೆ ಕೊಡುತ್ತಿದ್ದೀರಿ” ಎಂದು ಕಿಡಿ ಕಾರಿದರು.

Advertisement

Udayavani is now on Telegram. Click here to join our channel and stay updated with the latest news.

Next