Advertisement

Congress ಸರ್ಕಾರದ್ದು ತಾಲಿಬಾನ್‌ ಆಡಳಿತ ಮಾದರಿ: ಸಿ.ಟಿ.ರವಿ

09:10 PM Apr 23, 2024 | Team Udayavani |

ಮಂಡ್ಯ: ಕಾಂಗ್ರೆಸ್‌ ಸರ್ಕಾರದ ಓಲೈಕೆ ರಾಜನೀತಿಯ ಪರಿಣಾಮ ತಾಲಿಬಾನ್‌ ಮಾದರಿಯ ಆಡಳಿತ ನೆನಪಿಗೆ ಬರುತ್ತಿದೆ ಎಂದು ಬಿಜೆಪಿ ಮುಖಂಡ ಸಿ.ಟಿ.ರವಿ ಹೇಳಿದರು.

Advertisement

ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಪ್ರಧಾನಿ ಮೋದಿ ಅವರು ಕಳೆದ 10 ವರ್ಷಗಳಲ್ಲಿ ಅಭಿವೃದ್ಧಿಯ ಟ್ರೇಲರ್‌ ತೋರಿಸಿದ್ದರೆ, ರಾಜ್ಯ ಕಾಂಗ್ರೆಸ್‌ ಸರ್ಕಾರ ಕಳೆದ 10 ತಿಂಗಳಲ್ಲೇ ತಾಲಿಬಾನ್‌ ಆಡಳಿತದ ಟ್ರೇಲರ್‌ ತೋರಿಸಿದ್ದಾರೆ ಎಂದು ಕಿಡಿಕಾರಿದರು.

ಕಾಂಗ್ರೆಸ್‌ಗೆ ಜನ, ರಾಜ್ಯದ ಹಿತಕ್ಕಿಂತ ವೋಟ್‌ ಬ್ಯಾಂಕ್‌ ಮುಖ್ಯವಾಗಿದೆ. ಸರ್ವ ಜನಾಂಗದ ಶಾಂತಿಯ ತೋಟ ಎಂದು ಹೇಳುವ ನೀವು ಅಶಾಂತಿಯ ತೋಟವನ್ನಾಗಿ ಮಾಡಿದ್ದೀರಿ. ಜೈ ಶ್ರೀರಾಂ ಎಂದವರ ಮೇಲೆ ಅಲ್ಲಾಹು ಅಕºರ್‌ ಎಂದು ಕೂಗಿದ್ದು, ಮೋದಿ ಬಗ್ಗೆ ಹಾಡು ಬರೆದ ಯುವಕನ ಮೇಲೆ ಮೂತ್ರ ವಿಸರ್ಜನೆ, ನೇಹಾ ಕೊಲೆ ಪ್ರಕರಣ, ಕೇಸರಿ ಶಾಲು ಹಾಕಿದ್ದಕ್ಕೆ ನಮ್ಮ ಕಾರ್ಯಕರ್ತನ ಮೇಲೆ ಕಾರು ಹರಿಸಿ ಕೊಲೆ, ಯಾದಗಿರಿಯಲ್ಲಿ ದಲಿತ ಯುವಕನ ಕೊಲೆಗಳು ನಡೆದಿವೆ. ಇದೇನಾ ನಿಮ್ಮ ಶಾಂತಿಯ ತೋಟ ಎಂದು ಪ್ರಶ್ನಿಸಿದರು.

 

Advertisement

Udayavani is now on Telegram. Click here to join our channel and stay updated with the latest news.

Next