Advertisement

Congress: ಸರಕಾರ ಭ್ರಷ್ಟಾಚಾರದ ಶಾಪಿಂಗ್‌ ಮಾಲ್‌ ತೆರೆದಿದೆ: ಸಿ.ಟಿ.ರವಿ 

11:32 PM Sep 27, 2024 | Team Udayavani |

ಬೆಂಗಳೂರು: ನಮ್ಮ ವಿರುದ್ಧ ಭ್ರಷ್ಟಾಚಾರದ ಆರೋಪ ಹೊರಿಸಿದ್ದ ಕಾಂಗ್ರೆಸ್‌ ಈಗ ಭ್ರಷ್ಟಾಚಾರದ ಶಾಪಿಂಗ್‌ ಮಾಲ್‌ ಅನ್ನು ತೆರೆದಿದೆ. ಭ್ರಷ್ಟಾಚಾರ ಮಾಡುವಾಗ ತೋರುವ ಧೈರ್ಯ, ತನಿಖೆ ಎದುರಿಸುವಾಗ ಇಲ್ಲ. ಸಿದ್ದರಾಮಯ್ಯ ಪೂರ್ವಯೋಜಿತವಾಗಿ ಭ್ರಷ್ಟಾಚಾರ ಎಸಗುವ ಕ್ರಿಮಿನಲ್‌ ಮೈಂಡೆಡ್‌ ಕರಪ್ಟ್ ವ್ಯಕ್ತಿ. ನಿಷ್ಪಕ್ಷಪಾತ ತನಿಖೆಯ ದೃಷ್ಟಿಯಿಂದ ಸಿಎಂ ಸ್ಥಾನಕ್ಕೆ ರಾಜೀನಾಮೆ ಕೊಡಬೇಕು. ಇಲ್ಲದಿದ್ದರೆ, ವಿಧಾನಸಭೆ ವಿಸರ್ಜಿಸಬೇಕು ಎಂದು ವಿಧಾನಪರಿಷತ್‌ ಸದಸ್ಯ ಸಿ.ಟಿ.ರವಿ ಆಗ್ರಹಿಸಿದರು.

Advertisement

ಶುಕ್ರವಾರ ವಿಧಾನಸೌಧದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಅಭಿಯೋಜನೆಗೆ ಅನುಮತಿ ನೀಡಿದ ರಾಜ್ಯಪಾಲರಿಗೇ ಕಾಂಗ್ರೆಸ್ಸಿಗರು ಟೀಕಿಸಿದರು, ಪ್ರತಿಭಟಿಸಿದರು, ಬೆದರಿಕೆ ಹಾಕಿದರು. ಸಿದ್ದರಾಮಯ್ಯ ಸೇರಿದಂತೆ ಎಲ್ಲರೂ ಕಾನೂನಿಗೆ ತಲೆ ಬಾಗಲೇಬೇಕು ಎಂದರು.

ಜಮೀರ್‌ರನ್ನು ಸಂಪುಟದಿಂದ ವಜಾಗೊಳಿಸಿ ನ್ಯಾಯಾಲಯವೇ ರಾಜ್ಯಪಾಲರ ನಿರ್ಣಯವನ್ನು ಎತ್ತಿ ಹಿಡಿದಿದೆ. ಆದರೂ ಸಚಿವ ಜಮೀರ್‌ ಖಾನ್‌ ಪೊಲಿಟಿಕಲ್‌ ಜಡ್ಜ್ಮೆಂಟ್‌ ಎಂದಿದ್ದಾರೆ. ಸಂವಿಧಾನ, ಪ್ರಜಾಪ್ರಭುತ್ವದ ಮೇಲೆ ಗೌರವವಿದ್ದರೆ ಮೊದಲು ಅವರನ್ನು ಸಚಿವ ಸಂಪುಟದಿಂದ ವಜಾಗೊಳಿಸಬೇಕು ಎಂದು ಒತ್ತಾಯಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next