Advertisement

ಕಾಂಗ್ರೆಸ್‌ ಮುಕ್ತ ಭಾರತ ಸನ್ನಿಹಿತ: ಯಡಿಯೂರಪ್ಪ

11:21 PM Oct 26, 2019 | Team Udayavani |

ಹುಬ್ಬಳ್ಳಿ:“ಕಾಂಗ್ರೆಸ್‌ ಮುಕ್ತ ಭಾರತ’ ಆಗಬೇಕೆಂಬ ಕನಸು ಹಾಗೂ ಮಹಾತ್ಮಾ ಗಾಂಧಿ ಅವರ ಚಿಂತನೆ ಸಾಕಾರಗೊಳ್ಳುವ ಕಾಲ ಸನ್ನಿಹಿತವಾಗಿದೆ ಎಂದು ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ತಿಳಿಸಿದರು.  ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಹಾರಾಷ್ಟ್ರ, ಹರ್ಯಾಣಗಳಲ್ಲಿನ ಚುನಾವಣಾ ಫಲಿತಾಂಶದ ಬಗ್ಗೆ ಈಗಾಗಲೇ ಪ್ರಧಾನಿ ತಮ್ಮ ಅಭಿಪ್ರಾಯ ತಿಳಿಸಿದ್ದಾರೆ.

Advertisement

ಪಕ್ಷಕ್ಕೆ ಯಾವುದೇ ಹಿನ್ನಡೆಯಾಗಿಲ್ಲ. ಆದರೆ, ಕಾಂಗ್ರೆಸ್‌ ಯಾರೂ ಹೇಳ್ಳೋರು, ಕೇಳ್ಳೋರು ಇಲ್ಲದ ನಾಯಕತ್ವದ ಪಕ್ಷವಾಗಿದೆ. ಕಾಂಗ್ರೆಸ್‌ ಮುಕ್ತ ಭಾರತ ಆಗಬೇಕೆಂಬ ಕನಸು ಹಾಗೂ ಮಹಾತ್ಮಾ ಗಾಂಧಿ ಅವರ ಚಿಂತನೆ ಸಾಕಾರಗೊಳ್ಳುವ ಕಾಲ ಸನ್ನಿಹಿತವಾಗಿದೆ ಎಂದರು.

ನೆರೆ ಪರಿಹಾರಕ್ಕೆ ಹಣಕಾಸಿನ ತೊಂದರೆಯಿಲ್ಲ: ಅತಿವೃಷ್ಟಿ ಯಿಂದ ಮತ್ತೂಮ್ಮೆ ಜನ ತೊಂದರೆಗೊಳಗಾಗಿದ್ದು, ಅವರಿಗೆಲ್ಲ ಹಿಂದಿನಂತೆ ಸವಲತ್ತು ನೀಡಿ ನೆರವಿಗೆ ಬರುವಂತೆ ಜಿಲ್ಲಾಧಿಕಾರಿ ಗಳಿಗೆ ಸೂಚಿಸಲಾಗಿದೆ. ಹಣ ಬಿಡುಗಡೆ ಮಾಡಲಾಗಿದೆ. ನೆರೆ ಪರಿಹಾರಕ್ಕೆ ಹಣಕಾಸಿನ ತೊಂದರೆಯಿಲ್ಲ. ನೆರೆ ಸಂತ್ರಸ್ತರ ಸಮಸ್ಯೆ ಬಗೆಹರಿಸಲು ಗಮನ ಹರಿಸಲಾಗಿದೆ.

ಹಣಕಾಸು ಸಮಸ್ಯೆಯಿದ್ದರೂ ನೆರೆ ಸಂತ್ರಸ್ತರಿಗೆ ಮನೆ ನಿರ್ಮಿಸಲು 5 ಲಕ್ಷ ರೂ. ಕೊಡಲಾಗುತ್ತಿದೆ. ಮೊದಲ ಹಂತವಾಗಿ 1ಲಕ್ಷ ರೂ. ಕೊಡಲಾಗುತ್ತಿದೆ. ಸಂತ್ರಸ್ತರಿಗೆ ನಮ್ಮ ಸರಕಾರ ಕೊಟ್ಟಿರುವ ಸವಲತ್ತನ್ನು ಯಾರೂ ಮಾಡಿಲ್ಲ. ಕೆಲವರು ರಾಜಕೀಯವಾಗಿ ಇನ್ನಿಲ್ಲದ್ದನ್ನು ಹೇಳುತ್ತಿದ್ದಾರೆ ಎಂದು ಆರೋಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next