Advertisement

ಶಾಸಕ ದಬ್ಬಾಳಿಕೆ ನಡೆಸಿದ್ರೆ ಹುಚ್ಚು ನಾಯಿಗೆ ಹೊಡೆದಂತೆ ಹೊಡೆಯಿರಿ !

02:13 PM May 26, 2018 | |

ಪಿರಿಯಾರಪಟ್ಟಣ : ನೂತನ ಶಾಸಕರು ದಬ್ಬಾಳಿಕೆ ನಡೆಸಿದರೆ ಹುಚ್ಚು ನಾಯಿಗೆ ಹೊಡೆದಂತೆ ಹೊಡೆಯಿರಿ.ನಾನು ನಿಮಗೆ ಸಹಕಾರ ನೀಡುತ್ತೇನೆ  ಎಂದು ಪ್ರಚೋದನಾತ್ಮಕ ಭಾಷಣ ಮಾಡುವ ಮೂಲಕ ಕಾಂಗ್ರೆಸ್‌ ಮಾಜಿ ಶಾಸಕರೊಬ್ಬರು ವಿವಾದಕ್ಕೆ ಗುರಿಯಾಗಿದ್ದಾರೆ. 

Advertisement

ಪಿರಿಯಾರ ಪಟ್ಟಣ ಮಾಜಿ ಶಾಸಕ ಕೆ.ವೆಂಕಟೇಶ್‌ ಅವರು ಚುನಾವಣಾ  ಸೋಲಿನ ಕುರಿತು ಶುಕ್ರವಾರ ನಡೆಸಿದ ಆತ್ಮಾವಲೋಕನ ಸಭೆಯಲ್ಲಿ  ತಮ್ಮ ವಿರುದ್ಧ ಜಯಗಳಿಸಿದ ಜೆಡಿಎಸ್‌ ಶಾಸಕ ಕೆ.ಮಹದೇವ ಅವರ ವಿರುದ್ಧ  ಈ ಹೇಳಿಕೆ ನೀಡಿದ್ದಾರೆ. 

ನನ್ನ ಸೋಲಿಗೆ ನನ್ನವರೆ ಕಾರಣ.ಜೊತೆಗಿದ್ದುಕೊಂಡೆ ವಿಶ್ವಾಸಘಾತುಕತನ ಮಾಡಿ ಬೆನ್ನಿಗೆ ಚೂರಿ ಹಾಕಿದರು. ಮಧ್ಯಂತರ ಚುನಾವಣೆ ಎದುರಾದರೆ ನನಗೆ ಚುನಾವಣೆ ಎದುರಿಸುವ ಶಕ್ತಿ ಇಲ್ಲ ಎಂದರು. 

ಸಿಎಂ ಸಿದ್ದರಾಮಯ್ಯ ಅಪ್ತ ವಲಯಲ್ಲಿ ಗುರುತಿಸಿಕೊಂಡಿದ್ದ ವೆಂಕಟೇಶ್‌ ಅವರು ಮಹದೇವ್‌ ವಿರುದ್ಧ 7 ಸಾವಿರಕ್ಕೂ ಹೆಚ್ಚು ಮತಗಳ ಅಂತರದಿಂದ ಪರಾಜಿತರಾಗಿದ್ದರು. 

Advertisement

Udayavani is now on Telegram. Click here to join our channel and stay updated with the latest news.

Next