Advertisement

ಗೋವಾ: ಕನ್ನಡಿಗರ ಬೇಡಿಕೆ ಈಡೇರಿಸುವ ಭರವಸೆ ನೀಡಿದ ಸಿದ್ಧರಾಮಯ್ಯ

03:15 PM Feb 08, 2022 | Team Udayavani |

ಪಣಜಿ: ಗೋವಾ ವಿಧಾನಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಗೋವಾದಲ್ಲಿ ಕಾಂಗ್ರೆಸ್ ಪಕ್ಷದ ಪರ ಚುನಾವಣಾ ಪ್ರಚಾರ ನಡೆಸಲು ಕರ್ನಾಟಕದ ಪ್ರತಿಪಕ್ಷದ ನಾಯಕ ಸಿದ್ಧರಾಮಯ್ಯ ಗೋವಾಕ್ಕೆ ಆಗಮಿಸಿದ್ದು ಮಂಗಳವಾರ ಗೋವಾ ರಾಜಧಾನಿ ಪಣಜಿಯಲ್ಲಿ  ಕನ್ನಡ ಸಂಘಟನೆ ನಾಯಕರೊಂದಿಗೆ ಚರ್ಚೆ ನಡೆಸಿ, ಕನ್ನಡಿಗರ ಬೇಡಿಕೆ ಈಡೇರಿಸುವ ಭರವಸೆ ನೀಡಿದ್ದಾರೆ.

Advertisement

ಗೋವಾದಲ್ಲಿ ಕನ್ನಡ ಭವನ ನಿರ್ಮಾಣ, ಗೋವಾದಲ್ಲಿ ಕರ್ಮಯೋಗಿ ಕಾರ್ಪೊರೇಶನ್ ಸ್ಥಾಪನೆ, ಕನ್ನಡಿಗರಿರುವ ಸ್ಲಂ ಏರಿಯಾಗಳ ಅಭಿವೃದ್ಧಿ, ಗೋವಾದ ಜಾತಿ ಪ್ರಮಾಣ ಪತ್ರ ಲಭಿಸುವಂತೆ ಮಾಡುವುದು, ಗೋವಾದ ಎಲ್ಲ ಸರ್ಕಾರಿ ಯೋಜನೆಗಳು ಕನ್ನಡಿಗರಿಗೂ ಲಭಿಸಬೇಕು, ಬೈನಾ ನಿರಾಶ್ರಿತ ಕನ್ನಡಿಗ ಕುಟುಂಬಗಳಿಗೆ ಶಾಶ್ವತ ಪುನರ್ವಸತಿ ಕಲ್ಪಿಸುವುದು, ಹೀಗೆ ವಿವಿಧ ಬೇಡಿಕೆಗಳನ್ನು ಅಖಿಲ ಗೋವಾ ಮಹಾಸಂಘದ ಗೌರವಾಧ್ಯಕ್ಷ ಸಿದ್ಧಣ್ಣ ಮೇಟಿ ರವರು ಪ್ರತಿಪಕ್ಷದ ನಾಯಕ  ಸಿದ್ಧರಾಮಯ್ಯ ರವರ ಬಳಿ ಮನವಿ ಮಾಡಿದರು.

ಗೋವಾದಲ್ಲಿ ಕನ್ನಡಿಗರು ಎದುರಿಸುತ್ತಿರುವ ವಿವಿಧ ಸಮಸ್ಯೆಗಳ ಕುರಿತು ಅಖಿಲ ಗೋವಾ ಕನ್ನಡ ಮಹಾಸಂಘದ ಗೌರವಾಧ್ಯಕ್ಷ ಸಿದ್ಧಣ್ಣ ಮೇಟಿ ನೇತೃತ್ವದಲ್ಲಿ ಕನ್ನಡ ಸಂಘಟನೆಗಳು ಕರ್ನಾಟಕದ ಪ್ರತಿಪಕ್ಷದ ನಾಯಕ ಸಿದ್ಧರಾಮಯ್ಯ ರವರನ್ನು ಭೇಟಿ ಮಾಡಿ ಮನವಿ ಮಾಡಿದರು.

ಕರ್ನಾಟಕ ಕಾಂಗ್ರೆಸ್ ನಾಯಕ ಐವನ್ ಡಿಸೋಜಾ, ಶಾಸಕ ಜಮೀರ್ ಅಹಮ್ಮದ್, ಅಶೋಕ ಪಟ್ಟಣ, ಸುರೇಶ್ ಭೈರತ್ತಿ, ರಾಘವೇಂದ್ರ ಯತ್ನಾಳ, ಪ್ರಕಾಶ ರಾಠೋಡ್, ವಿಜಯಪುರ ಜಿ.ಪಂ ಮಾಜಿ ಅಧ್ಯಕ್ಷೆ ನೀಲಮ್ಮ ಮೇಟಿ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next