Advertisement

ಕಾಂಗ್ರೆಸ್‌ನಲ್ಲಿ ಚುನಾವಣೆಗೆ ಆಗ್ರಹ

12:22 AM Jul 29, 2019 | Team Udayavani |

ಹೊಸದಿಲ್ಲಿ: ಕಾಂಗ್ರೆಸ್‌ ಅಧ್ಯಕ್ಷ ಸ್ಥಾನಕ್ಕೆ ರಾಹುಲ್‌ ಗಾಂಧಿ ರಾಜೀನಾಮೆ ನೀಡಿದ ನಂತರ, ಪಕ್ಷವನ್ನು ಯಾರು ಮುನ್ನಡೆಸಬೇಕೆಂಬ ಗೊಂದಲ ಇನ್ನೂ ಮುಂದುವರಿದಿದೆ. ಇದರಿಂದಾಗಿ, ಪಕ್ಷಕ್ಕೆ ಹಾನಿಯಾಗುತ್ತಿದೆ ಎಂದು ಕಾಂಗ್ರೆಸ್‌ ಸಂಸದ ಶಶಿ ತರೂರ್‌ ಹೇಳಿದ್ದು, ಈ ಅನಿಶ್ಚಿತತೆ ನಿವಾರಣೆಗೆ, ಪಕ್ಷದ ಅಧ್ಯಕ್ಷ ಪಟ್ಟ ಸೇರಿದಂತೆ ಕಾರ್ಯಕಾರಿ ಹುದ್ದೆಗಳಿಗೆ ಚುನಾವಣೆ ನಡೆಯಬೇಕೆಂದು ಅವರು ಅಭಿಪ್ರಾಯಪಟ್ಟಿದ್ದಾರೆ.

Advertisement

ಎಲ್ಲಾ ಹುದ್ದೆಗಳಿಗೂ ಮುಕ್ತ ಚುನಾವಣೆ ನಡೆಯುವುದರಿಂದ ಹೊಸ ನಾಯಕರ ಪ್ರವೇಶವಾಗುತ್ತದೆ. ಪಕ್ಷದಲ್ಲಿಯೂ ಹೊಸತನ ಬರುತ್ತದೆ.

ಅನಿಶ್ಚಿತತೆ ದೂರಾಗುತ್ತದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. ಪಕ್ಷದ ಎಲ್ಲಾ ಉನ್ನತ ಹುದ್ದೆಗಳಿಗೆ ಮುಕ್ತ ಚುನಾವಣೆಗಳು ನಡೆದಾಗ, ಕಾಂಗ್ರೆಸ್‌ನ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ವಾದ್ರಾ ಅವರು ಅದರಲ್ಲಿ ಸ್ಪರ್ಧಿಸಿದರೆ ಉತ್ತಮ ಎಂದು ಅವರು ಇದೇ ವೇಳೆ ಆಶಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next