Advertisement

ಬಿಜೆಪಿ ಸರಕಾರವನ್ನು ಇಕ್ಕಟ್ಟಿಗೆ ಸಿಲುಕಿಸಲು ಕಾಂಗ್ರೆಸ್ ರಣತಂತ್ರ: ಸಿಎಲ್ ಪಿ ಸಭೆ ಆರಂಭ

11:59 AM Sep 18, 2019 | Team Udayavani |

ಬೆಂಗಳೂರು: ಬಿಜೆಪಿ ಸರಕಾರವನ್ನು ಇಕ್ಕಟ್ಟಿಗೆ ಸಿಲುಕಿಸಲು ರಣತಂತ್ರ ಹಣೆದಿರುವ  ಕಾಂಗ್ರೆಸ್  ಕೆಪಿಸಿಸಿ ಕಚೇರಿಯಲ್ಲಿ ಶಾಸಕಾಂಗ ಪಕ್ಷದ  ಸಭೆಯನ್ನು ಏರ್ಪಡಿಸಿದೆ.

Advertisement

ಸಿಎಲ್ ಪಿ  ನಾಯಕ ಸಿದ್ದರಾಮಯ್ಯ ನೇತೃತ್ವದಲ್ಲಿ ಸಭೆ ಆರಂಭವಾಗಿದ್ದು ನೆರೆ ಸಂತ್ರಸ್ತರಿಗೆ ಸರ್ಕಾರ ತೆಗದುಕೊಂಡಿರುವ ಪರಿಹಾರ ಕಾರ್ಯಗಳು ,ಕೇಂದ್ರ ಸರ್ಕಾರ ಇದುವರೆಗೂ ಹಣ ಬಿಡುಗಡೆ ಮಾಡದೇ  ವಿಳಂಬ ನೀತಿ ಅನುಸರಿಸುತ್ತಿರುವುದು, ಕಾಂಗ್ರೆಸ್ ಶಾಸಕರ ಕ್ಷೇತ್ರಗಳಿಗೆ ಅನುದಾನ ತಾರತಮ್ಯ, ಕಾಂಗ್ರೆಸ್ ಯೋಜನೆಗಳನ್ನ ತನಿಖೆಗೆ ಕೊಟ್ಟಿರುವ ವಿಚಾರ ಮುಂತಾದ ಹಲವು ವಿಚಾರಗಳು ಸಭೆಯಲ್ಲಿ ಮುನ್ನೆಲೆಗೆ ಬರಲಿದೆ.

ಮುಂದಿನ ದಿನಗಳಲ್ಲಿ ಬಿಜೆಪಿ ಸರ್ಕಾರದ ವಿರುದ್ಧ ಹೋರಾಟವನ್ನು ತೀವ್ರಗೊಳಿಸುವ ಬಗ್ಗೆಯೂ ಇದೇ ವೇಳೆ ಚರ್ಚೆ ನಡೆಯಲಿದೆ.

Advertisement

Udayavani is now on Telegram. Click here to join our channel and stay updated with the latest news.

Next