Advertisement

Kalaburagi; ಎಐಸಿಸಿ ಅಧ್ಯಕ್ಷರ ತವರಿನಲ್ಲಿ ಮತ್ತೆ ಕೈ ಹಿಡಿದ ಮತದಾರ: ಖರ್ಗೆ ಅಳಿಯ ಸಂಸತ್ ಗೆ

03:30 PM Jun 04, 2024 | Team Udayavani |

ಕಲಬುರಗಿ: ಅಖಿಲ ಭಾರತ ಕಾಂಗ್ರೆಸ್ ಸಮಿತಿ (ಎಐಸಿಸಿ) ಅಧ್ಯಕ್ಷ ಡಾ. ಮಲ್ಲಿಕಾರ್ಜುನ ಖರ್ಗೆ ತವರು ಕಲಬುರಗಿಯಲ್ಲಿ ಮತ್ತೆ ಕಾಂಗ್ರೆಸ್ ದಿಗ್ವಿಜಯ ಸಾಧಿಸಿದೆ.

Advertisement

ಡಾ.ಖರ್ಗೆ ಅವರ ಅಳಿಯ ಡಾ.ರಾಧಾಕೃಷ್ಣ ದೊಡ್ಡಮನಿ ಬಿಜೆಪಿಯ ಡಾ. ಉಮೇಶ ಜಾಧವ್ ಅವರನ್ನು ಸೋಲಿಸಿ ಸಂಸತ್ ಗೆ ಪ್ರವೇಶಿಸಿದ್ದಾರೆ.

ಕಳೆದ 2009ರ ಚುನಾವಣೆಯಲ್ಲಿ ಡಾ. ಮಲ್ಲಿಕಾರ್ಜುನ ಖರ್ಗೆ ಅವರನ್ನು 95 ಸಾವಿರ ಮತಗಳ ಅಂತರದಿಂದ ಸೋಲಿಸಿ ಸಂಸತ್ ಗೆ ಪ್ರವೇಶಿಸಿದ್ದ ಬಿಜೆಪಿಯ ಡಾ. ಉಮೇಶ ಜಾಧವ್ ಈಗ ಖರ್ಗೆ ಅವರ ಅಳಿಯ ರಾಧಾಕೃಷ್ಣ ಎದುರು ಪರಾಭವಗೊಂಡಿದ್ದಾರೆ.

ಬಿಜೆಪಿ ಪಕ್ಷವು ಚುನಾವಣೆಯನ್ನು ಕಳೆದ ಸಲ ಪಡೆದಷ್ಟು ಗಂಭೀರತೆ ಈ ಸಲ ಪಡೆಯದಿರುವುದು ಹಾಗೂ ಕಾಂಗ್ರೆಸ್ ಪಕ್ಷದ ಸಂಘಟಿತ ಪ್ರಯತ್ನವೇ ಗೆಲುವಿಗೆ ಕಾರಣವೆಂದು ವಿಶ್ಲೇಷಿಸಲಾಗುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next