Advertisement

ಮೂಲ್ಕಿ ಸೀಮೆ ಅರಮನೆಗೆ ಮಿಥುನ್‌ ರೈ ಭೇಟಿ

07:48 PM Apr 10, 2019 | Team Udayavani |

ಪಡುಪಣಂಬೂರು: ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ಮಿಥುನ್‌ ರೈ ಅವರು ಗುರುವಾರ ಇಲ್ಲಿನ ತೋಕೂರು ಶ್ರೀ ಸುಬ್ರಹ್ಮಣ್ಯ ಮಹಾಗಣಪತಿ ದೇವಸ್ಥಾನ, ಬೊಳ್ಳೂರು ಮಸೀದಿ, ಪಡುಪಣಂಬೂರು ಕದಿಕೆ ದರ್ಗಾ, ಹಾಗೂ ಪಡುಪಣಂಬೂರು ಮೂಲ್ಕಿ ಸೀಮೆಯ ಅರಮನೆಗೆ ಭೇಟಿ ನೀಡಿದರು.

Advertisement

ಸೀಮೆಯ ಅರಸರಾದ ಎಂ. ದುಗ್ಗಣ್ಣ ಸಾವಂತರು ಬಸದಿಯಲ್ಲಿ ದೇವರ ಪ್ರಸಾದವನ್ನು ನೀಡಿ ಶುಭ ಹಾರೈಸಿದರು.

ಮಾಜಿ ಸಚಿವರಾದ ಕೆ. ಅಮರನಾಥ ಶೆಟ್ಟಿ, ಕೆ.ಅಭಯಚಂದ್ರ ಜೈನ್‌, ಮೂಲ್ಕಿ ಅರಮನೆಯ ಗೌತಮ್‌ ಜೈನ್‌, ಕೆಪಿಸಿಸಿ ಸದಸ್ಯ ಎಚ್‌.ವಸಂತ ಬೆರ್ನಾಡ್‌, ಜಿಲ್ಲಾ ಮಹಿಳಾ ಕಾಂಗ್ರೆಸ್‌ನ ಅಧ್ಯಕ್ಷೆ ಶಾಲೆಟ್‌ ಪಿಂಟೋ, ಮೂಲ್ಕಿ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಧನಂಜಯ ಮಟ್ಟು, ಯುವ ಕಾಂಗ್ರೆಸ್‌ ಅಧ್ಯಕ್ಷರುಗಳಾದ ಚಂದ್ರಹಾಸ್‌ ಸನಿಲ್‌ ಮತ್ತು ಹಕೀಂ ಮೂಲ್ಕಿ, ಮಹಿಳಾ ಕಾಂಗ್ರೆಸ್‌ ಅಧ್ಯಕ್ಷೆ ಪದ್ಮಾವತಿ ಶೆಟ್ಟಿ, ಪಡುಪಣಂಬೂರು ಗ್ರಾಮ ಪಂಚಾಯತ್‌ ಸದಸ್ಯ ಉಮೇಶ್‌ ಪೂಜಾರಿ, ಹಳೆಯಂಗಡಿ ಗ್ರಾಮ ಪಂಚಾಯತ್‌ನ ಸದಸ್ಯರಾದ ಚಂದ್ರಕುಮಾರ್‌, ಅಬ್ದುಲ್‌ ಖಾದರ್‌, ಅಬ್ದುಲ್‌ ಅಜೀಜ್‌, ಸವಿತಾ ಶರತ್‌ ಬೆಳ್ಳಾಯರು, ದಿನೇಶ್‌ ಸುವರ್ಣ, ಲತಾ ತೋಕೂರು ಮತ್ತಿತರರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next