Advertisement

ಕಾಂಗ್ರೆಸ್‌ ಅಭ್ಯರ್ಥಿ ಹನುಮಲಿ ಮತಯಾಚನೆ

11:42 AM Apr 30, 2018 | Team Udayavani |

ಚಿತ್ರದುರ್ಗ: ಚಿತ್ರದುರ್ಗ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ಹನುಮಲಿ ಷಣ್ಮುಖಪ್ಪ ಭಾನುವಾರ ಅನ್ನೇಹಾಳ್‌, ಗೊಡಬನಾಳ್‌, ಹುಲ್ಲೂರು ಗ್ರಾಮ ಪಂಚಾಯತ್‌ ವ್ಯಾಪ್ತಿಯ ವಿವಿಧ ಗ್ರಾಮಗಳಿಗೆ ತೆರಳಿ ಮತಯಾಚನೆ ಮಾಡಿದರು.

Advertisement

ಈ ಸಂದರ್ಭದಲ್ಲಿ ಮಾತನಾಡಿದ ಅವರು, ಚಿತ್ರದುರ್ಗ ನಗರ ಸೇರಿದಂತೆ ಗ್ರಾಮಾಂತರ ಭಾಗದಲ್ಲಿ ಸುಸಜ್ಜಿತ ರಸ್ತೆ, ಶುದ್ಧ ಕುಡಿಯುವ ನೀರಿನ ಸೌಲಭ್ಯ, ಸಮುದಾಯ ಭವನಗಳು, ಚೆಕ್‌ಡ್ಯಾಂ ಸೇರಿದಂತೆ ವಿವಿಧ ಕಾಮಗಾರಿಗಳನ್ನು ಅನುಷ್ಠಾನಗೊಳಿಸಿ ಚಿತ್ರದುರ್ಗ ಕ್ಷೇತ್ರವನ್ನು ಮಾದರಿ ಕ್ಷೇತ್ರವನ್ನಾಗಿ ಮಾಡುತ್ತೇನೆ. ಆದ್ದರಿಂದ ಜನಸೇವೆ ಮಾಡಲು ಅವಕಾಶ ಕಲ್ಪಿಸಿಕೊಡುವಂತೆ ಕೋರಿದರು. ಮಾಜಿ ಶಾಸಕ ಎಸ್‌.ಕೆ. ಬಸವರಾಜನ್‌, ಜಿಲ್ಲಾ ಕಾಂಗ್ರೆಸ್‌ ಪ್ರಚಾರ ಸಮಿತಿ ಅಧ್ಯಕ್ಷ ಜಿ.ಎಸ್‌. ಮಂಜುನಾಥ್‌, ಕಾಂಗ್ರೆಸ್‌ ಖಂಡರಾದ ಜಿ.ಎಸ್‌. ಮಂಜುನಾಥ್‌, ಮಹಡಿ ಶಿವಮೂರ್ತಿ, ಮೆಹಬೂಬ್‌ ಪಾಷ, ಸೈಯ್ಯದ್‌ ವಲಿ ಖಾದ್ರಿ, ಡಿ. ದುರುಗೇಶಪ್ಪ, ಪುಟ್ಟಸ್ವಾಮಿ, ಎಸ್‌.ಎಂ.ಎಸ್‌.ಟಿ. ಫಯಾಜ್‌, ಡಿ.ಎನ್‌. ಮೈಲಾರಪ್ಪ, ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಪ್ರಕಾಶ್‌, ರುದ್ರಾಣಿ ಗಂಗಾಧರ, ಪೈಲ್ವಾನ್‌ ತಿಪ್ಪೇಸ್ವಾಮಿ, ರಾಜೇಂದ್ರ, ಮರುಳಾರಾಧ್ಯ, ಮಹಲಿಂಗಪ್ಪ, ಲಿಂಗರಾಜ್‌, ಅಂಜಿನಪ್ಪ, ಗೊಡಬನಾಳ್‌ ಗ್ರಾಪಂ ಸದಸ್ಯ ಕಲ್ಲಪ್ಪ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next