Advertisement

25 ಕಾಂಗ್ರೆಸ್‌ ಅಭ್ಯರ್ಥಿಗಳಿಗೆ “ಬಿ- ಫಾರಂ’

12:37 AM Apr 14, 2023 | Team Udayavani |

ಬೆಂಗಳೂರು: ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಆರಂಭವಾದ ಮೊದಲ ದಿನವೇ ಕಾಂಗ್ರೆಸ್‌ನ 25ಕ್ಕೂ ಅಭ್ಯರ್ಥಿಗಳಿಗೆ ಬಿ-ಫಾರಂ ವಿತರಿಸಲಾಗಿದೆ. ಕೆಪಿಸಿಸಿ ಕಚೇರಿಯಲ್ಲಿ ಗುರುವಾರ ಆಯೋಜಿಸಲಾದ ಕಾರ್ಯಕ್ರಮದಲ್ಲಿ ಭಾಗವಹಿಸಿದ ಅಧ್ಯಕ್ಷ ಡಿ.ಕೆ. ಶಿವಕುಮಾರ್‌, ಅಭ್ಯರ್ಥಿಗಳಿಗೆ ಬಿ-ಫಾರಂ ವಿತರಿಸಿ ಗೆಲುವಿಗೆ ಶುಭ ಕೋರಿದರು.

Advertisement

ಇದಕ್ಕೂ ಮುನ್ನ ದೇವರ ಮೊರೆಹೋದ ಕೆಪಿಸಿಸಿ ಅಧ್ಯಕ್ಷರು, ಕಚೇರಿಯ ತಮ್ಮ ಕೊಠಡಿಯಲ್ಲಿದ್ದ ನೊಣವಿನಕೆರೆ ಅಜ್ಜಯ್ಯ ಫೋಟೋಗೆ ನಮಿಸಿದರು. ಅನಂತರ ಎಲ್ಲ ಫಾರಂಗಳನ್ನು ಸ್ವಲ್ಪ ಹೊತ್ತು ದೇವರ ಫೋಟೋಗಳ ಮುಂದಿಟ್ಟು ಪ್ರಾರ್ಥಿಸಿದರು. ಅನಂತರ ಕ್ಷಣಕಾಲ ಕಣ್ಣಿಗೊತ್ತಿ ಒಬ್ಬೊಬ್ಬ ಅಭ್ಯರ್ಥಿಗಳನ್ನು ಕರೆದು ವಿತರಣೆ ಮಾಡಿ, “ಗುಡ್‌ ಲಕ್‌…’, “ಆಲ್‌ ದಿ ಬೆಸ್ಟ್‌’ ಎಂದು ಬೆನ್ನುತಟ್ಟಿದರು. ಇದಕ್ಕೆ ಪ್ರತಿಯಾಗಿ ಫಾರಂ ಸ್ವೀಕರಿಸಿದ ಬಹುತೇಕ ಉಮೇದುವಾರರು, ಅಧ್ಯಕ್ಷರಿಗೆ ನಮಸ್ಕರಿಸಿ ಥ್ಯಾಂಕ್ಸ್‌ ಹೇಳಿದರೆ, ಕೆಲವರು ಕಾಲಿಗೆರಗಿ ಧನ್ಯವಾದ ಸಲ್ಲಿಸಿದರು. ಮೊದಲ ಬಿ.ಫಾರಂ ಅನ್ನು ಹೆಬ್ಟಾಳ ಶಾಸಕ ಬೈರತಿ ಸುರೇಶ್‌ಗೆ ನೀಡಿದರು.

ಮೊದಲ ದಿನ ಚಾಮರಾಜಪೇಟೆ ಯಿಂದ ಸ್ಪರ್ಧಿಸಲಿರುವ ಜಮೀರ್‌ ಅಹಮ್ಮದ್‌ ಖಾನ್‌, ಚಿತ್ತಾಪುರದ ಪ್ರಿಯಾಂಕ ಖರ್ಗೆ, ಹೆಬ್ಟಾಳದ ಬೈರತಿ ಸುರೇಶ್‌, ಆರ್‌.ಆರ್‌. ನಗರದ ಕುಸುಮಾ ಹನುಮಂತರಾಯಪ್ಪ, ಗೋವಿಂದರಾಜನಗರದ ಪ್ರಿಯಕೃಷ್ಣ, ಶಿವಾಜಿನಗರದ ರಿಜ್ವಾನ್‌ ಅರ್ಷದ್‌, ಮಧುಗಿರಿಯ ಕೆ.ಎನ್‌.ರಾಜಣ್ಣ, ಕೆಜಿಎಫ್ಗೆ ಕೇಂದ್ರ ಮಾಜಿ ಸಚಿವ ಕೆ.ಎಚ್‌. ಮುನಿಯಪ್ಪ ಪುತ್ರಿ ರೂಪಾ ಶಶಿಧರ್‌, ಬಸವನಗುಡಿಗೆ ಯು.ಬಿ. ವೆಂಕಟೇಶ್‌ ಸೇರಿದಂತೆ ಹಲವು ಘಟಾನುಘಟಿಗಳು ಬಿ-ಫಾರಂ ಪಡೆದರು. ಶುಕ್ರವಾರ ಇನ್ನೂ ಕೆಲವರು ಬಿ-ಫಾರಂ ಪಡೆಯಲಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next