Advertisement

ಕಾಂಗ್ರೆಸ್‌ ಮತ್ತು ಬರ ಭಾಯಿ ಭಾಯಿ!

06:25 AM Jan 17, 2018 | Team Udayavani |

ನವದೆಹಲಿ: ಕಾಂಗ್ರೆಸ್‌ ಮತ್ತು ಬರ ಭಾಯಿ ಭಾಯಿ ಇದ್ದಂತೆ. ಕಾಂಗ್ರೆಸ್‌ ಹೋದಲ್ಲೆಲ್ಲ ಬರವೂ ಹೋಗುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ರಾಜಸ್ಥಾನದ ಬಾರ್ಮರ್‌ನಲ್ಲಿ ಕಾಂಗ್ರೆಸ್‌ ವಿರುದ್ಧ ಟೀಕಿಸಿದ್ದಾರೆ. ಆದರೆ ರಾಜಸ್ಥಾನದಲ್ಲಿ ವಸುಂಧರಾ ಆಡಳಿತವಿದ್ದಾಗಲೆಲ್ಲ ಬರವನ್ನು ಚೆನ್ನಾಗಿ ನಿಭಾಯಿಸಿದ್ದಾರೆ. ಕಾಂಗ್ರೆಸ್‌ ಆಡಳಿತದಲ್ಲಿ ಬರ ನಿರ್ವಹಣೆ ಅತ್ಯಂತ ಕಳಪೆಯಾಗಿತ್ತು ಎಂದಿದ್ದಾರೆ.

Advertisement

ಪಚ್‌ಪದ್ರಾದಲ್ಲಿ ತೈಲ ಸಂಗ್ರಹಾಗಾರ ಕಾಮಗಾರಿಗೆ ಚಾಲನೆ ನೀಡಿದ ಅವರು, ಕಾಂಗ್ರೆಸ್‌ಗೆ ಶಿಲಾನ್ಯಾಸ ನೆರವೇರಿಸುವುದಷ್ಟೇ ಗೊತ್ತು. ನಂತರ ಯಾವ ಕೆಲಸವನ್ನೂ ಮಾಡುವುದಿಲ್ಲ ಎಂದು ಟೀಕಿಸಿದರು. ಪಚ್‌ಪದ್ರಾದಲ್ಲಿ 43,129 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗುವ ತೈಲ ಸಂಗ್ರಹಾಗಾರದ ಶಿಲಾನ್ಯಾಸವನ್ನು ನಾಲ್ಕು ವರ್ಷಗಳ ಹಿಂದೆ ಕಾಂಗ್ರೆಸ್‌ ಮಾಜಿ ಅಧ್ಯಕ್ಷೆ ಸೋನಿಯಾ ಗಾಂಧಿ ನೆರವೇರಿಸಿದ್ದರು. ಅದರೆ ನಂತರ ಕಾಮಗಾರಿಗೆ ಚಾಲನೆ ಸಿಕ್ಕಿರಲಿಲ್ಲ. ಈ ಹಿನ್ನೆಲೆಯಲ್ಲಿ ಈಗಾಗಲೇ ಶಿಲಾನ್ಯಾಸ ಮಾಡಲಾಗಿರುವ ಯೋಜನೆಗೆ ಮತ್ತೆ ಶಿಲಾನ್ಯಾಸ ಮಾಡಲಾಗುತ್ತಿದ್ದು, ಕಾರ್ಯಕ್ರಮದ ಹೆಸರನ್ನಷ್ಟೇ ಬದಲಿಸಲಾಗಿದೆ ಎಂದು ಕಾಂಗ್ರೆಸ್‌ ಮುಖಂಡ ಅಶೋಕ್‌ ಗೆಹೊÉàಟ್‌ ಟೀಕಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next