Advertisement

ಕಾಂಗ್ರೆಸ್‌ನದ್ದು ಲೂಟಿಕೋರರ ಮೈತ್ರಿ : ಪ್ರಧಾನಿ ಮೋದಿ ಕಿಡಿ

09:52 AM Nov 26, 2019 | Team Udayavani |

ಡಾಲ್ಟೊನ್‌ಗಂಜ್‌: ಜಾರ್ಖಂಡ್‌ನ‌ ಪ್ರಮುಖ ವಿಪಕ್ಷ ಮೈತ್ರಿಯಾದ ಜೆಎಂಎಂ- ಕಾಂಗ್ರೆಸ್‌- ಆರ್‌ಜೆಡಿ ವಿರುದ್ಧ ಗುಡುಗಿರುವ ಪ್ರಧಾನಿ ನರೇಂದ್ರ ಮೋದಿ, ‘ಈ ಮೂರೂ ಪಕ್ಷಗಳು ಜಾರ್ಖಂಡ್‌ನ‌ಲ್ಲಿ ಈ ಹಿಂದೆ ನಡೆಸಿದ ಸರಕಾರಗಳೆಲ್ಲವೂ, ಸ್ವಹಿತಾಸಕ್ತಿ ಹಾಗೂ ಅಧಿಕಾರ ದಾಹದಿಂದ ಕೂಡಿದ್ದವಾಗಿದ್ದವು. ಈ ಮೂರೂ ಪಕ್ಷಗಳು, ಜಾರ್ಖಂಡ್‌ನ‌ ಸಂಪತ್ತನ್ನೂ ಲೂಟಿ ಹೊಡೆದಿವೆ. ಅಲ್ಲದೆ, ರಾಜ್ಯದ ಜ್ವಲಂತ ಸಮಸ್ಯೆ ಯಾದ ನಕ್ಸಲ್‌ ಸಮಸ್ಯೆಯನ್ನೂ ನಿವಾರಿಸುವಲ್ಲಿ ವಿಫ‌ಲವಾಗಿವೆ’ ಎಂದು ಟೀಕಿಸಿದ್ದಾರೆ.

Advertisement

ಡಾಲ್ಟೊನ್‌ಗಂಜ್‌ನಲ್ಲಿ ಸೋಮವಾರ ಬಿಜೆಪಿ ಚುನಾವಣಾ ರ್ಯಾಲಿಯಲ್ಲಿ ಮಾತನಾಡಿದ ಅವರು, ‘ಈ ಬಾರಿಯ ಜಾರ್ಖಂಡ್‌ನ‌ ಚುನಾವಣೆ ಲೂಟಿ ಮಾಡಿದವರ ಹಾಗೂ ಸೇವೆ ಮಾಡಿದವರ ನಡುವಿನ ಸಮರ. ಆಡಳಿತದ ವಿಚಾರಕ್ಕೆ ಬರುವುದಾದರೆ, ಸಾಮಾಜಿಕ ನ್ಯಾಯದ ಐದು ಅಂಶಗಳಾದ ಸ್ಥಿರತೆ, ಉತ್ತಮ ಆಡಳಿತ, ಸಮೃದ್ಧಿ, ಸರ್ವರಿಗೂ ಗೌರವ ಹಾಗೂ ಸರ್ವರ ಭದ್ರತೆಗಳಿಗೆ ಬಿಜೆಪಿ ಹಾಗೂ ಜಾರ್ಖಂಡ್‌ನ‌ ಜಲ-ಅರಣ್ಯ – ಭೂಮಿಯ ರಕ್ಷಣೆಗೆ ಬಿಜೆಪಿ ಬದ್ಧವಾಗಿದೆ’ ಎಂದು ಹೇಳಿದರು.

ಕಾಂಗ್ರೆಸ್‌ ಮನಸ್ಸು ಮಾಡಿದ್ದರೆ, ಜಮ್ಮು ಕಾಶ್ಮೀರದ ವಿಶೇಷ ಸ್ಥಾನಮಾನ, ರಾಮಜನ್ಮಭೂಮಿ ಸಮಸ್ಯೆಗಳನ್ನು ಯಾವಾಗಲೋ ಬಗೆಹರಿಸ ಬಹುದಿತ್ತು. ಆದರೆ ತನ್ನ ವೋಟ್‌ ಬ್ಯಾಂಕ್‌ ಅನ್ನು ಭದ್ರಪಡಿಸುವ ಉದ್ದೇಶಕ್ಕಾಗಿ ಕಾಂಗ್ರೆಸ್‌ ಈ ಸಮಸ್ಯೆಗಳನ್ನು ದಶಕಗಳವರೆಗೆ ಜೀವಂತವಾಗಿಟ್ಟುಕೊಂಡಿತ್ತು ಎಂದು ಆರೋಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next