Advertisement

ಕೊಳ್ಳೇಗಾಲದಲ್ಲಿ ಕೋವಿಡ್‌ 19 ವಾರಿಯರ‍್ಸ್‌ಗೆ ಅಭಿನಂದನೆ

05:50 AM Jun 02, 2020 | Lakshmi GovindaRaj |

ಕೊಳ್ಳೇಗಾಲ: ಕೋವಿಡ್‌ 19 ವೈರಸ್‌ ಹರಡದಂತೆ ಸಕ್ರಿಯವಾಗಿ ಸೇವೆ ಸಲ್ಲಿಸಿದ ಕೋವಿಡ್‌ 19 ವಾರಿಯರ್ಗೆ ಶಾಸಕ ಮಹೇಶ್‌ ಹೂಮಳೆ ಸುರಿಸಿ ಕೃತಜ್ಞತೆ ಸಲ್ಲಿಸಿದರು.

Advertisement

ಪಟ್ಟಣದಲ್ಲಿ ಮಹೇಶ್‌ ಅಭಿಮಾನಿ ಬಳಗದಿಂದ ಮಹೇಶ್‌ 65ನೇ  ಹುಟ್ಟುಹಬ್ಬದ ಅಂಗವಾಗಿ ಕೋವಿಡ್‌ 19 ವಾರಿಯರ‍್ಸ್‌ಗಳಾದ ಪೊಲೀಸರು, ಪೌರಕಾರ್ಮಿಕರು, ಆರೋಗ್ಯ ಇಲಾಖೆ, ಕಂದಾಯ ಇಲಾಖೆ, ಆಶಾ ಕಾರ್ಯಕರ್ತೆ ರಿಗೆ ಹೂಮಳೆ ಸುರಿಸಿ ಅಭಿನಂದನೆ ಸಲ್ಲಿಸಿದರು. ಬಳಿಕ ಮಾತನಾಡಿದ ಶಾಸಕ  ಮಹೇಶ್‌, ಕೋವಿಡ್‌ 19 ವಾರಿಯರ‍್ಸ್‌ ಗಳ ಪರಿಶ್ರಮದಿಂದ ಜಿಲ್ಲೆ ಹಸಿರು ವಲಯವಾಗಿದೆ.

ಪ್ರತಿಯೊಬ್ಬರು ಕೇಂದ್ರ ಸರ್ಕಾರದ ನಿಯಮದಂತೆ ಮಾಸ್ಕ್, ಸ್ಯಾನಿಟೈಸರ್‌ ಮತ್ತು ಸಾಮಾಜಿಕ ಅಂತರ ಕಾಪಾಡಿಕೊಳ್ಳಬೇಕೆಂದು ಮನವಿ ಮಾಡಿದರು. ಈ ಸಂದರ್ಭದಲ್ಲಿ ನಗರಸ  ಭಾ ಸದಸ್ಯರಾದ ನಾಷೇರ್‌ ಷರೀಫ್, ಪ್ರಕಾಶ್‌, ರಾಮಕೃಷ್ಣ, ಮಾಜಿ ನಗರಸ ಭಾ ಅಧ್ಯಕ್ಷ ಸೆಲ್ವರಾಜ್‌, ಮುಖಂಡರಾ ದ ವೀರಭದ್ರಸ್ವಾಮಿ, ಜಗದೀಶ್‌, ಸಿದ್ದರಾಜು ಇನ್ನಿತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next