Advertisement

ಕೋವಿಡ್ 19 ವಾರಿಯರ್ಸ್ ರ್ಗೆ ಅಭಿನಂದನೆ

12:11 PM Apr 30, 2020 | Suhan S |

ಅಳ್ನಾವರ:  ಕೋವಿಡ್ 19 ಸೊಂಕು ಹರಡದಂತೆ ತಡೆಯುವಲ್ಲಿ ಮತ್ತು ಜನರಲ್ಲಿ ಜಾಗೃತಿ ಮೂಡಿಸುವಲ್ಲಿ ಕೋವಿಡ್ 19 ವಾರಿಯರ್ಸ್ ಗಳ ಪಾತ್ರ ಬಹುಮುಖ್ಯವಾಗಿದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಬಸವರಾಜ ಕುಂದಗೋಳಮಠ ಹೇಳಿದರು.

Advertisement

ಪೊಲೀಸ್‌, ಆರೋಗ್ಯ, ಪಪಂ ಹಾಗೂ ಕಂದಾಯ ಇಲಾಖೆ ಸಿಬ್ಬಂದಿಗೆ ಸೇವಾ ಭಾರತಿ ಟ್ರಸ್ಟ್‌ ವತಿಯಿಂದ ಮಾಸ್ಕ್, ಸ್ಯಾನಿಟೈಸರ್‌ ವಿತರಿಸಿ, ಪಕ್ಷದ ವತಿಯಿಂದ ಅಭಿನಂದನಾ ಪತ್ರ ನೀಡಿ ಅವರು ಮಾತನಾಡಿದರು. ಲಾಕ್‌ಡೌನ್‌ ಯಶಸ್ವಿಗೊಳಿಸಲು ಪೊಲೀಸರು ಹಗಲಿರುಳು ಶ್ರಮಿಸುತ್ತಿದ್ದಾರೆ.

ಸರ್ಕಾರದ ನಿರ್ದೇಶನಗಳನ್ನು ಕಟ್ಟು ನಿಟ್ಟಾಗಿ ಅನುಷ್ಟಾನಗೊಳಿಸಲು ವಿವಿಧ ಇಲಾಖೆ ಸಿಬ್ಬಂದಿ ಪಾತ್ರವೂ ಅಧಿಕವಾಗಿದೆ. ಇವರೆಲ್ಲರಿಗೂ ನಾವು ಚಿರಋಣಿಯಾಗಿದ್ದು ಅವರ ಕಾರ್ಯದಲ್ಲಿ ಕೈಜೋಡಿಸೋಣ ಎಂದರು.

ಬಿಜೆಪಿ ಅಳ್ನಾವರ ಮಂಡಲಾಧ್ಯಕ್ಷ ಕಲ್ಮೇಶ ಬೈಲೂರ, ಎಂಎಸ್‌ಐಎಲ್‌ ನಿರ್ದೆಶಕ ಶಿವಾಜಿಡೊಳ್ಳಿನ, ಸಂದೀಪ ಬೂದಿಹಾಳ, ರಮೇಶ ಕದಂ, ಪಪಂ ಸದಸ್ಯ ಯಲ್ಲಾರಿ ಹುಬ್ಬಳ್ಳಿಕರ, ಲಿಂಗರಾಜ ಮೂಲಿಮನಿ, ನಾರಾಯಣ ಮೋರೆ, ಪ್ರವೀಣ ಪವಾರ, ಬಸವರಾಜ ಕಡಕೋಳ, ರಾಜೇಶ ಬೈಕೇರಿಕರ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next