Advertisement

ಸರಕಾರ ರಚನೆಗಾಗಿ ಹಿರಿಯ ಕೈ ನಾಯಕರು ಮೇಘಾಲಯಕ್ಕೆ

12:03 PM Mar 03, 2018 | udayavani editorial |

ಹೊಸದಿಲ್ಲಿ : ಮೇಘಾಲದಲ್ಲಿ ಕಾಂಗ್ರೆಸ್‌ ಏಕೈಕ ದೊಡ್ಡ ಪಕ್ಷವಾಗಿ ಮೂಡಿ ಬರುವ ಖಚಿತ ಸಾಧ್ಯತೆಗಳಿರುವುದನ್ನು ಗಮನಿಸಿ ಅಲ್ಲಿ ಸರಕಾರ ರಚಿಸುವ ಅವಕಾಶಗಳನ್ನು ಅನ್ವೇಷಿಸುವ ನಿಟ್ಟಿನಲ್ಲಿ ಕಾಂಗ್ರೆಸ್‌ ತನ್ನ ಉನ್ನತ ನಾಯಕರನ್ನು ಅಲ್ಲಿಗೆ ಕಳುಹಿಸುತ್ತಿದೆ. 

Advertisement

ಮೂಲಗಳ ಪ್ರಕಾರ ಹಿರಿಯ ಕಾಂಗ್ರೆಸ್‌ ನಾಯಕ ಅಹ್ಮದ್‌ ಪಟೇಲ್‌ ಮತ್ತು ಕಮಲ್‌ ನಾಥ್‌ ಅವರು ಇಂದು ಬೆಳಗ್ಗೆ ಶಿಲ್ಲಾಂಗ್‌ಗೆ ತೆರಳಿದ್ದಾರೆ. ಸರಕಾರ ರಚಿಸುವ ನಿಟ್ಟಿನಲ್ಲಿ ಪಕ್ಷೇತರರೊಂದಿಗೆ ಸಂಭಾವ್ಯ ಹೊಂದಾಣಿಕೆಯನ್ನು ರೂಪಿಸುವುದು ಕಾಂಗ್ರೆಸ್‌ ತಂತ್ರವಾಗಿದೆ. 

ಮೇಘಾಲಯದಲ್ಲಿ ಪ್ರಕೃತ ಕಾಂಗ್ರೆಸ್‌ ಆಡಳಿತಾರೂಢ ಪಕ್ಷವಾಗಿದೆ. ಇಂದು ಮತ ಎಣಿಕೆ ಜಾರಿಯಲ್ಲಿರುವಂತೆಯೇ ಕಾಂಗ್ರೆಸ್‌ ಏಕೈಕ ದೊಡ್ಡ  ಪಕ್ಷವಾಗಿ ಮೂಡಿ ಬರಲಿರುವುದರಿಂದ ರಾಜ್ಯದಲ್ಲಿ ಮತ್ತೆ ಸರಕಾರ ರಚಿಸಲು ಹಿರಿಯ ಕಾಂಗ್ರೆಸ್‌ ನಾಯಕರು ಅಲ್ಲಿಗೆ ಧಾವಿಸಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next