Advertisement

ವರದಕ್ಷಿಣೆ ಕಿರುಕುಳ : ಕಾಂಗ್ರೆಸ್‌ ಮೇಯರ್‌ ಅಭ್ಯರ್ಥಿ, ಪತಿ ಬಂಧನ

04:58 PM Nov 22, 2018 | udayavani editorial |

ಕಾಶೀಪುರ : ಸೊಸೆ ದಾಖಲಿಸಿದ್ದ ವರದಕ್ಷಿಣೆ ಕಿರುಕುಳ ಕೇಸಿಗೆ ಸಂಬಂಧಪಟ್ಟ ಪೊಲೀಸರು ಕಾಂಗ್ರೆಸ್‌ ಪಕ್ಷದ ಕಾಶೀಪುರ ಮೇಯರ್‌ ಅಭ್ಯರ್ಥಿ ಮುಕ್ತಾ ಸಿಂಗ್‌ ಮತ್ತು ಆಕೆಯ ಪತಿ ರವೀಂದ್ರ ಸಿಂಗ್‌ ಅವರನ್ನು ಬಂಧಿಸಿದ್ದಾರೆ. 

Advertisement

ಈ ಬಂಧನ ರಾಜಕೀಯ ಪ್ರೇರಿತವಾದುದೆಂದು ಆರೋಪಿಸಿ ಕಾಂಗ್ರೆಸ್‌ ಪಕ್ಷ ತೀವ್ರ ಪ್ರತಿಭಟನೆ ನಡೆಸಿದೆ. 

ಸೊಸೆ ಪ್ರಿಯಾಂಕಾ ಅವರು ಕಳೆದ ಸೆ.28ರಂದು ದಾಖಲಿಸಿದ್ದ ವರದಕ್ಷಿಣೆ ಕಿರುಕುಳ ಕೇಸಿಗೆ ಸಂಬಂಧಿಸಿ ಅತ್ತೆ ಮುಕ್ತಾ ಸಿಂಗ್‌ ಮತ್ತು ಮಾವ ರವೀಂದ್ರ ಸಿಂಗ್‌ ಅವರನ್ನು ಬಂಧಿಸಲಾಗಿದೆ ಎಂದು ಡಿಎಸ್‌ಪಿ ರಾಜೇಶ್‌ ಭಟ್‌ ತಿಳಿಸಿದ್ದಾರೆ. 

ಬಂಧನವನ್ನು ಪ್ರತಿಭಟಿಸಿ ಕಾಂಗ್ರೆಸ್‌ ಕೋತ್ವಾಲಿ ಎದುರುಗಡೆ ಧರಣಿ ನಡೆಸಿತು. ಧರಣಿ ನೇತೃತ್ವ ವಹಿಸಿದ ಮಾಜಿ ಸಂಸದ ಕೆ ಸಿ ಸಿಂಗ್‌ ಬಾಬಾ ಅವರು “ಇದು ಬಿಜೆಪಿ ನಡೆಸಿರುವ ರಾಜಕೀಯ ದ್ವೇಷ ಸಾಧನೆಯ ಕ್ರಮವಾಗಿದೆ’ ಎಂದು ಆರೋಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next