Advertisement

ಕಾಂಗ್ರೆಸ್‌ ನಾಯಕ ಸುಖ ರಾಮ್‌ ಪುತ್ರ ಹಿ.ಪ್ರ.ಬಿಜೆಪಿ ಸರಕಾರಕ್ಕೆ ರಾಜೀನಾಮೆ

12:15 PM Apr 13, 2019 | Sathish malya |

ಶಿಮ್ಲಾ : ಹಿಮಾಚಲ ಪ್ರದೇಶ ವಿದ್ಯುತ್‌ ಸಚಿವ ಅನಿಲ್‌ ಶರ್ಮಾ ಅವರು ತಮ್ಮ ರಾಜ್ಯ ಬಿಜೆಪಿ ಸರಕಾರಕ್ಕೆ ಇಂದು ಶುಕ್ರವಾರ ತಮ್ಮ ರಾಜೀನಾಮೆ ನೀಡಿದ್ದಾರೆ.

Advertisement

ಅನಿಲ್‌ ಶರ್ಮಾ ಅವರ ಪುತ್ರ ಆಶ್ರಯ್‌ ಶರ್ಮಾ ಅವರನ್ನು ಕಾಂಗ್ರೆಸ್‌ ಪಕ್ಷ ಮಂಡಿ ಲೋಕಸಭಾ ಕ್ಷೇತ್ರದಿಂದ ತನ್ನ ಅಭ್ಯರ್ಥಿಯಾಗಿ ಕಣಕ್ಕಿಳಿಸಿರುವುದೇ ಶರ್ಮಾ ಅವರ ಒತ್ತಡದ ರಾಜೀನಾಮೆಗೆ ಕಾರಣವಾಗಿದೆ.

ಕೆಲ ದಿನಗಳ ಹಿಂದೆ ಅನಿಲ್‌ ಶರ್ಮಾ ಅವರ ತಂದೆ, ಮಾಜಿ ಕೇಂದ್ರ ಸಚಿವ ಸುಖ ರಾಮ್‌ ಅವರು ಬಿಜೆಪಿ ತೊರೆದು ಮೊಮ್ಮಗ ಆಶ್ರಯ್‌ ಶರ್ಮಾ ಜತೆಗೆ ಕಾಂಗ್ರೆಸ್‌ ಸೇರಿದ್ದರು.

ಅನಿಲ್‌ ಶರ್ಮಾ ಅವರು ತನ್ನ ಪುತ್ರನ ವಿರುದ್ಧ ಲೋಕಸಭಾ ಚುನಾವಣಾ ಕಣದಲ್ಲಿರುವ ಬಿಜೆಪಿ ಅಭ್ಯರ್ಥಿ ಪರ ಪ್ರಚಾರ ನಡೆಸಲು ನಿರಾಕರಿಸಿದ್ದರು. ಮಾತ್ರವಲ್ಲದೆ ತಾನು ಕೂಡ ಬಿಜೆಪಿ ತೊರೆಯಲು ಸಿದ್ಧ ಎಂದು ಹೇಳಿದ್ದರು.

ತಾನೀಗ ಸಚಿವ ಪದಕ್ಕೆ ರಾಜೀನಾಮೆ ನೀಡಿರುವೆನಾದರೂ ತಾನು ಈಗಲೂ ಬಿಜೆಪಿಯಲ್ಲೇ ಇದ್ದೇನೆ ಎಂದು ಅನಿಲ್‌ ಶರ್ಮಾ ಸುದ್ದಿಗಾರರೊಂದಿಗೆ ಮಾತನಾಡುತ್ತಾ ಹೇಳಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next