Advertisement

ಸಿಕ್ಖ್ ವಿರೋಧಿ ದೊಂಬಿಯಲ್ಲಿ ಕಮಲ್‌ ನಾಥ್‌: ದಿಲ್ಲಿ ಬಿಜೆಪಿ ನಾಯಕ

12:42 PM Dec 17, 2018 | Team Udayavani |

ಹೊಸದಿಲ್ಲಿ : 1984ರ ಸಿಕ್ಖ್ ವಿರೋಧಿ ದೊಂಬಿಯಲ್ಲಿ  ಕಾಂಗ್ರೆಸ್‌ ನಾಯಕ ಕಮಲ್‌ ನಾಥ್‌ ಶಾಮೀಲಾಗಿದ್ದರು ಎಂದು ಆರೋಪಿಸಿರುವ ದಿಲ್ಲಿ ಬಿಜೆಪಿ ನಾಯಕ ತೇಜಿಂದರ್‌ ಪಾಲ್‌ ಸಿಂಗ್‌ ಬಗ್ಗಾ ಅವರು, ಕಮಲ್‌ ನಾಥ್‌ ಅವರನ್ನು  ಮಧ್ಯ ಪ್ರದೇಶ ಮುಖ್ಯಮಂತ್ರಿಯಾಗಿ ಹೆಸರಿಸಲಾಗಿರುವುದರ ವಿರುದ್ಧ ಇಂದು ಸೋಮವಾರ ಆಮರಣ ಉಪವಾಸ ಸತ್ಯಾಗ್ರಹ ಆರಂಭಿಸಿದರು. 

Advertisement

1984ರ ಸಿಕ್ಖ್ ವಿರೋಧಿ ದೊಂಬಿಯ ಅನೇಕ ಸಂತ್ರಸ್ತರು ವಾಸಿಸಿಕೊಂಡಿರುವ ಪಶ್ಚಿಮ ದಿಲ್ಲಿಯ ತಿಲಕ್‌ ನಗರ್‌ ಪ್ರದೇಶದಲ್ಲಿ ತನ್ನ ಆಮರಣ ನಿರಶನ ಆರಂಭಿಸಿರುವ ಬಗ್ಗಾ ಅವರು, “ಸಿಕ್ಖ್ ವಿರೋಧಿ ದೊಂಬಿಯಲ್ಲಿ ಶಾಮೀಲಾಗಿದ್ದ ಕಮಲ್‌ ನಾಥ್‌ ಅವರನ್ನು ಮಧ್ಯ ಪ್ರದೇಶ ಮುಖ್ಯಮಂತ್ರಿಯನ್ನಾಗಿ ಹೆಸರಿಸಿರುವ ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಅವರ ನಿರ್ಧಾರವನ್ನು ಪ್ರತಿಭಟಿಸಿ ನಾನು ಆಮರಣ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದೇನೆ’ ಎಂದು ಹೇಳಿದರು. 

Advertisement

Udayavani is now on Telegram. Click here to join our channel and stay updated with the latest news.

Next