Advertisement

ನೆರಿಯ: ಕ್ವಾರಂಟೈನ್‌ ಕೇಂದ್ರದ ಗೊಂದಲ

12:18 AM May 23, 2020 | Team Udayavani |

ಮುಂಡಾಜೆ: ತಮಿಳುನಾಡಿನಿಂದ ಬಂದಿರುವ ಮೂವರನ್ನು ಸರಕಾರಿ ಕ್ವಾರಂಟೈನ್‌ ಕೇಂದ್ರವಾದ ಗಂಡಿಬಾಗಿಲು ಶಾಲೆಯಲ್ಲಿ ಕ್ವಾರಂಟೈನ್‌ ಮಾಡದೇ, ನೆರಿಯ ಗ್ರಾಮದ ಆಲಂಗಾಯಿ ಸರಕಾರಿ ಪ. ವರ್ಗಗಳ ಆಶ್ರಮ ಶಾಲೆಯಲ್ಲಿ ಸರಕಾರಿ ಕ್ವಾರಂಟೈನ್‌ ಮಾಡಿದ ಕುರಿತು ಬೆಳ್ತಂಗಡಿಯ ನೆರಿಯ ಗ್ರಾಮದಲ್ಲಿ ಗುರುವಾರ ಒಂದಿಷ್ಟು ಗೊಂದಲದ ವಾತಾವರಣ ನಿರ್ಮಾಣವಾಯಿತು.

Advertisement

ಕ್ವಾರಂಟೈನ್‌ನಲ್ಲಿರುವವರಲ್ಲಿ ಕೋವಿಡ್‌-19 ದೃಢಪಟ್ಟರೆ ವಸತಿ ಶಾಲೆಯ ಸ್ವತ್ಛತೆ, ಅಲ್ಲಿಗೆ ಬರುವ ಮಕ್ಕಳ ಸುರಕ್ಷತೆ, ಮುನ್ನೆಚ್ಚರಿಕೆ ಕುರಿತು ಗ್ರಾ.ಪಂ.ನ್ನು ಗ್ರಾಮಸ್ಥರು ಪ್ರಶ್ನಿಸಿದರು.ಈ ಬಗ್ಗೆ ನೆರಿಯ ಗ್ರಾ.ಪಂ., ಪಿಡಿಒ ಮಾತನಾಡಿ, ತಾಲೂಕು ಆಡಳಿತದಿಂದ ಬಂದ ಆದೇಶದ ಪ್ರಕಾರ ಕ್ವಾರಂಟೈನ್‌ ಕೇಂದ್ರ ಗುರುತಿಸುವಿಕೆಯಲ್ಲಿ ಮೊದಲ ಆದ್ಯತೆ ಹಾಸ್ಟೆಲ್‌ ಮತ್ತು ವಸತಿ ಶಾಲೆಗಳಿಗೆ ಇರುತ್ತದೆ.

ಗಂಡಿಬಾಗಿಲು ಕ್ವಾರಂಟೈನ್‌ ಕೇಂದ್ರದಲ್ಲಿ ಮೂವರಿಗೆ ಬೇಕಾದ ಸ್ನಾನಗೃಹ, ಶೌಚಾಲಯ ವ್ಯವಸ್ಥೆ ಇಲ್ಲದ ಕಾರಣ ಇಲ್ಲಿ ಕ್ವಾರಂಟೈನ್‌ಗೆ ಒಳಪಡಿಸುವುದು ಅನಿವಾರ್ಯ. ಮುಂದಿನ ಎಲ್ಲ ಸುರಕ್ಷಾ ಕ್ರಮಗಳನ್ನು ಜಿಲ್ಲಾಡಳಿತ, ತಾಲೂಕು ಆಡಳಿತ ಹಾಗೂ ಗ್ರಾ.ಪಂ. ವಹಿಸಿಕೊಳ್ಳಲಿದೆ ಎಂದು ಗ್ರಾಮಸ್ಥರಿಗೆ ತಿಳಿಸಿದರು. ಬಳಿಕ ಗ್ರಾಮಸ್ಥರು ಕ್ವಾರಂಟೈನ್‌ ಕೇಂದ್ರದ ಬಳಿ ಜಮಾಯಿಸಿದ್ದ ಗ್ರಾಮಸ್ಥರು ಸ್ಥಳದಿಂದ ತೆರಳಿದರು.

 

Advertisement

Udayavani is now on Telegram. Click here to join our channel and stay updated with the latest news.

Next