Advertisement

ರಾಮಮಂದಿರಕ್ಕಾಗಿ ಮುಸ್ಲಿಂ ಸಂಘಟನೆಯ ಸಮ್ಮೇಳನ

07:41 AM Nov 17, 2018 | Team Udayavani |

ಹೊಸದಿಲ್ಲಿ: ಆರೆಸ್ಸೆಸ್‌ ಜೊತೆ ಗುರುತಿಸಿಕೊಂಡಿರುವ ಮುಸ್ಲಿಂ ರಾಷ್ಟ್ರೀಯ ಮಂಚ್‌ ರಾಮ ಮಂದಿರ ನಿರ್ಮಾಣಕ್ಕಾಗಿ ಬೃಹತ್‌ ಸಮ್ಮೇಳನ ನಡೆಸಲು ನಿರ್ಧರಿಸಿದೆ. ರಾಮಲೀಲಾ ಮೈದಾನದಲ್ಲಿ ಸದ್ಯದಲ್ಲೇ ಸಮ್ಮೇಳನ ನಡೆಯಲಿದ್ದು, ಮುಸ್ಲಿಂ ರಾಷ್ಟ್ರೀಯ ಮಂಚ್‌ನ ಒಂದು ಲಕ್ಷಕ್ಕೂ ಹೆಚ್ಚು ಕಾರ್ಯಕರ್ತರು ಭಾಗವಹಿ ಸಲಿದ್ದಾರೆ. ಈ ಸಂಬಂಧ ವಿವಿಧ ಮುಸ್ಲಿಂ ಸಂಘಟನೆಗಳ ಮುಖಂಡರು ತೀನ್‌ಮೂರ್ತಿ ಭವನದಲ್ಲಿ ಸಭೆ ನಡೆಸಿ ನಿರ್ಧರಿಸಿದ್ದಾರೆ. 

Advertisement

ಆರೆಸ್ಸೆಸ್‌ ಮುಖಂಡ ಇಂದ್ರೇಶ್‌ ಕುಮಾರ್‌ ಕೂಡ ಈ ಸಭೆಯಲ್ಲಿ ಹಾಜರಿರಲಿದ್ದಾರೆ ಎನ್ನಲಾಗಿದೆ. “ಕಸಮ್‌ ಖುದಾ ಕಿ ಖಾತೇ ಹೈ, ಮಂದಿರ್‌ ವಹೀ ಬನಾಯೆಂಗೆ’ (ದೇವರ ಮೇಲೆ ಆಣೆ ಇಟ್ಟು ಹೇಳುತ್ತೇವೆ, ಮಂದಿರ ವನ್ನು ಅಲ್ಲೇ ನಿರ್ಮಿಸುತ್ತೇವೆ) ಎಂಬ ಘೋಷವಾಕ್ಯವನ್ನೂ ಘೋಷಿಸಲಾಗಿದೆ. ರಾಮಮಂದಿರ ನಿರ್ಮಾಣಕ್ಕೆ ಕೇಂದ್ರ ಸರಕಾರದ ಮೇಲೆ ಒತ್ತಡ ಹೆಚ್ಚಿಸು ವುದೇ ಈ ಸಮ್ಮೇಳನದ ಉದ್ದೇಶ ಎನ್ನಲಾಗಿದೆ. ಇನ್ನೊಂದೆಡೆ, ಅಖೀಲ ಭಾರತೀಯ ಸಂತ ಸಮಿತಿ ಕೂಡ ನ. 25ರಂದು ಇನ್ನೊಂದು ರ್ಯಾಲಿಯನ್ನು ನಾಗ್ಪುರ ಹಾಗೂ ಬೆಂಗಳೂರಿನಲ್ಲಿ ಹಮ್ಮಿಕೊಳ್ಳಲಿದೆ.

Advertisement

Udayavani is now on Telegram. Click here to join our channel and stay updated with the latest news.

Next