Advertisement

ಸೇನಾಧಿಕಾರಿ ಸಾವು: ಕುಟುಂಬಸ್ಥರಿಗೆ ಸಾಂತ್ವನ

03:43 PM Aug 20, 2022 | Team Udayavani |

ಬೀದರ: ರಾಜಸ್ಥಾನದಲ್ಲಿ ಭಾರತೀಯ ಸೈನ್ಯದ ಕ್ಯಾಪ್ಟನ್‌ ಆಗಿ ಸೇವೆ ಸಲ್ಲಿಸುತ್ತಿದ್ದ ಕೇರಳದ ಕೊಚ್ಚಿನದ ಯುವಕ ನಿರ್ಮಲ ಸಿವಾರಾಜನ್‌ ಆಕಸ್ಮಿಕ ಸಾವು ಹಿನ್ನೆಲೆ ಶುಕ್ರವಾರ ಕೇಂದ್ರ ರಸಾಯನಿಕ ಮತ್ತು ರಸಗೊಬ್ಬರ ಖಾತೆ ಸಚಿವ ಭಗವಂತ ಖೂಬಾ ಅವರು ಮೃತರ ಮನೆಗೆ ತೆರಳಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು.

Advertisement

ದೇಶ ಸೇವೆಯಲ್ಲಿದ್ದ ನಿರ್ಮಲ ಸಿವಾರಾಜನ್‌ ಅವರು ಸೇವೆಗೆ ವಾಪಸ್ಸಾಗುತ್ತಿದ್ದ ವೇಳೆಯಲ್ಲಿ ರಭಸದ ಮಳೆಯಲ್ಲಿ ಕಾರು ನದಿಗೆ ಜಾರಿ ನೀರಿನಲ್ಲಿ ಮುಳುಗಿ ಪ್ರಾಣ ಬಿಟ್ಟಿದ್ದಾರೆ. ಕೇರಳದ ಪ್ರವಾಸದಲ್ಲಿದ್ದ ಸಚಿವರು, ಕೊಚ್ಚಿನಲ್ಲಿರುವ ಯೋಧನ ಮನೆಗೆ ತೆರಳಿ ಕುಟುಂಬಸ್ಥರಿಗೆ ಧೈರ್ಯ ತುಂಬಿದರು.

Advertisement

Udayavani is now on Telegram. Click here to join our channel and stay updated with the latest news.

Next