Advertisement

ಅಗಲಿದ ‘ಸಂಚಾರಿ ವಿಜಯ್’ಗೆ ಚಂದನವನದ ನಟರ ಕಂಬಿನಿ

03:28 PM Jun 14, 2021 | Team Udayavani |

ಬೆಂಗಳೂರು:  ಬೈಕ್ ಅಪಘಾತದಲ್ಲಿ ಮಡಿದ ನಟ ಸಂಚಾರಿ ವಿಜಯ್ ಅವರ ನಿಧನಕ್ಕೆ ಕನ್ನಡ ಚಿತ್ರರಂಗ ಕಂಬಿನಿ ಮಿಡಿದಿದೆ.

Advertisement

ಚಂದನವನದ ಹಿರಿಯ ಹಾಗೂ ಕಿರಿಯ ನಟ-ನಟಿಯರು, ನಿರ್ದೇಶಕರು ಸೇರಿದಂತೆ ಇಡೀ ಚಂದನವನ ಅಗಲಿದ ನಟನಿಗೆ ಸಂತಾಪ ಸೂಚಿಸಿದೆ.

ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಟ್ವೀಟ್ ಮಾಡಿ, ಬಹುಬೇಗನೆ ಹೋಗಿ ಬಿಟ್ಟಿರಿ ವಿಜಯ್ ಎಂದು ದುಃಖ ವ್ಯಕ್ತಪಡಿಸಿದ್ದಾರೆ. ಟ್ವಿಟರಿನಲ್ಲಿ ಸಂತಾಪ ಸೂಚಿಸಿರುವ ಶಿವಣ್ಣ,  ವಿಜಯ್ ಸಾವಿನ ಸುದ್ದಿ ಕೇಳಿ ಆಘಾತವಾಯಿತು. ಅವರೊಬ್ಬ ಒಳ್ಳೆಯ ಹೃದಯವಂತ ವ್ಯಕ್ತಿ ಹಾಗೂ ನಟರಾಗಿದ್ದಾರೆ. ಅವರ ಕುಟುಂಬಕ್ಕೆ ದುಃಖ ತಡೆದುಕೊಳ್ಳುವ ಶಕ್ತಿ ದೇವರು ಕರುಣಿಸಲಿ ಎಂದಿದ್ದಾರೆ.

Advertisement

ನಟ ಕಿಚ್ಚ ಸುದೀಪ್ ಅವರೂ ವಿಜಯ್ ಅವರ ಸಾವಿಗೆ ಕಣ್ಣೀರು ಸುರಿಸಿದ್ದಾರೆ. ಸಂಚಾರಿ ವಿಜಯ್ ಕೊನೆಯುಸಿರೆಳೆದಿದ್ದಾನೆಂದು ತಿಳಿದು ತುಂಬಾನೇ ಬೇಸರವಾಗಿದೆ. ಲಾಕ್ ಡೌನ್ ಗಿಂತ ಕೆಲವೇ ದಿನಗಳ ಮೊದಲು ಎರಡೆರಡು ಬಾರಿ ಅವನನ್ನು ಭೇಟಿಯಾಗಿದ್ದೆ. ರಿಲೀಸ್ ಆಗಬೇಕಿರುವ ತನ್ನ ಮುಂದಿನ ಸಿನಿಮಾ ಬಗ್ಗೆ ಭಾರೀ ಆಶಾವಾದಿಯಾಗಿ ಮಾತನಾಡಿದ್ದ. ತುಂಬಾ ಬೇಸರವಾಗುತ್ತಿದೆ. ಅವನ ಕುಟುಂಬಸ್ಥರು, ಸ್ನೇಹಿತರಿಗೆ ಸಂತಾಪಗಳು ಎಂದು ಭಾವುಕರಾಗಿ ಬರೆದಿದ್ದಾರೆ.

ಇನ್ನುಳಿದಂತೆ ಗೋಲ್ಡನ್ ಸ್ಟಾರ್ ಗಣೇಶ್, ನೆನಪಿರಲಿ ಪ್ರೇಮ್, ನೀನಾಸಂ ಸತೀಶ್ ಸೇರಿದಂತೆ ಹಲವರು ಕಂಬಿನಿ ಮೀಡಿದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next