Advertisement

ಸಚಿವ ಶ್ರೀರಾಮುಲು ಹೇಳಿಕೆಗೆ ಖಂಡನೆ

07:15 PM Mar 16, 2021 | Team Udayavani |

ಗುರುಮಠಕಲ್‌ : ನ್ಯಾ| ಸದಾಶಿವ ಆಯೋಗದ ವರದಿ ಜಾರಿಗೊಳಿಸುವುದಾಗಿ ಭರವಸೆ ಕೊಟ್ಟಿರುವ ಸಚಿವ ಶ್ರೀರಾಮುಲು ಹೇಳಿಕೆ ಖಂಡಿಸಿ ಮತ್ತು ವರದಿ ಜಾರಿಗೊಳಿಸದಂತೆ ಆಗ್ರಹಿಸಿ ತಾಲೂಕಿನ ಆಲ್‌ ಇಂಡಿಯಾ ಬಂಜಾರಾ ಸೇವಾ ಸಂಘದ ವತಿಯಿಂದ ಪ್ರತಿಭಟನೆ ನಡೆಸಿ ತಹಶೀಲ್ದಾರ್‌ಗೆ ಸೋಮವಾರ ಮನವಿ ಸಲ್ಲಿಸಲಾಯಿತು.

Advertisement

ಪಟ್ಟಣದ ಕನಕ ವೃತ್ತದಿಂದ ಬಸ್‌ ನಿಲ್ದಾಣ ಮುಖ್ಯ ರಸ್ತೆ ಮೂಲಕ ಬಸವೇಶ್ವರ ವೃತ್ತದಿಂದ ತಹಶೀಲ್ದಾರ್‌ ಕಚೇರಿವರೆಗೆ ಪ್ರತಿಭಟನಾ ಮೆರವಣಿಗೆ ಮಾಡಿ ತಹಶೀಲ್ದಾರ್‌ಗೆ ಮನವಿ ಸಲ್ಲಿಸಲಾಯಿತು. ತಾಲೂಕು ಹಕ್ಕು ಹೋರಾಟ ಸಮಿತಿ ಅಧ್ಯಕ್ಷ ಸುರೇಶ ರಾಠೊಡ್‌ ಮಾತನಾಡಿ, ಸಚಿವ ಶ್ರೀರಾಮುಲು ನ್ಯಾ| ಸದಾಶಿವ ವರದಿ ಜಾರಿಗೆ ತರುತ್ತೇವೆ ಎಂದಿದ್ದು, ಇದರಿಂದ ಚಲವಾದಿ, ಲಂಬಾಣಿ, ಕೊರಚ ಮತ್ತು ಕೊರಮ ಬಂಜಾರಾ ಮುಂತಾದ ಸಮುದಾಯಕ್ಕೆ ನೋವಾಗಿದೆ.

ಈ ಕೂಡಲೇ ಅವರು ಸಮುದಾಯಕ್ಕೆ ಕ್ಷಮೆ ಕೇಳಬೇಕು. ತಮ್ಮ ಹೇಳಿಕೆ ಹಿಂಪಡೆಯುವಂತೆ ಆಗ್ರಹಿಸಿದರು. ಈ ವೇಳೆ ಸಮಾಜದ ಪ್ರಧಾನ ಕಾರ್ಯದರ್ಶಿ ಮೊನಪ್ಪ ರಾಠೊಡ್‌, ಪರಶುರಾಮ ಚವ್ಹಾಣ, ಪ್ರೇಮ್‌ ಕುಮಾರ, ರಾಜು ಚವ್ಹಾಣ, ಮೇಘನಾಥ, ಗೋಪಾಲ, ಜಮುಲನಾಯಕ್‌, ಲಕ್ಷ್ಮಿ ಬಾಯಿ, ಕಾಶಿಬಾಯಿ ರಾಠೊಡ್‌, ವಿ.ಕೆ. ನಾಯಕ್‌, ಎಚ್‌.ನಾಯಕ, ತುಳಸಿರಾಮ್‌, ಲಕ್ಷ್ಮಿ ಬಾಯಿ ಜಾಧವ್‌, ಶಿವುಕುಮಾರ, ಸುಶೀಲಾಬಾಯಿ, ಶಾನಿಬಾಯಿ, ಶರಣಪ್ಪ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next