Advertisement

ಸುದೀಪ ಅವಹೇಳನಕ್ಕೆ ಖಂಡನೆ

08:53 PM Apr 02, 2021 | Team Udayavani |

ಶಹಾಪುರ: ಸಾಮಾಜಿಕ ಜಾಲತಾಣದಲ್ಲಿ ನಟೇಶ ಎಂಬ ಹೆಸರಿನ ಫೇಸ್‌ ಖಾತೆ ಮೂಲಕ ಚಿತ್ರನಟ ಕಿಚ್ಚ ಸುದೀಪ ಬಗ್ಗೆ ಅವಹೇಳನಕಾರಿ ಮಾತು ಹಾಗೂ ಜಾತಿ ನಿಂದನೆ ಮಾಡುತ್ತಿರುವ ಆರೋಪಿಗಳನ್ನು ಕೂಡಲೇ ಪತ್ತೆ ಹಚ್ಚಿ ಬಂಧಿಸಿ ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಅಖೀಲ ಕರ್ನಾಟಕ ವಾಲ್ಮೀಕಿ ರತ್ನ ಬಾದ್‌ ಶಾ ಕಿಚ್ಚ ಸುದೀಪ ಸೇನೆ ಪ್ರತಿಭಟನೆ ನಡೆಸಿತು.

Advertisement

ದುಷ್ಕರ್ಮಿಗಳ ವರ್ತನೆ ಖಂಡಿಸಿದ ಸೇನೆ ನಂತರ ತಹಶೀಲ್ದಾರ್‌ ಜಗನ್ನಾಥರಡ್ಡಿ ಅವರಿಗೆ ಮನವಿ ಸಲ್ಲಿಸಿತು. ವಾಲ್ಮೀಕಿ ನಾಯಕ ಸಮುದಾಯದ ಪ್ರತಿಭೆ ಸುದೀಪ ಹಾಗೂ ವಾಲ್ಮೀಕಿ ಸಮುದಾಯದ ಬಗ್ಗೆ ಹಗುರವಾಗಿ ಟೀಕೆ ಮಾಡುವ ಮೂಲಕ ಸಾಮಾಜಿಕ ಶಾಂತಿ ಕದಡುವ ಕೆಲಸ ಮಾಡುತ್ತಿರುವ ದುಷ್ಟಶಕ್ತಿಗಳನ್ನು ತಕ್ಷಣ ಬಂಧಿಸುವಂತೆ ಸೇನೆಯ ಮುಖಂಡರು ಒತ್ತಾಯಿಸಿದರು.

ಈ ವೇಳೆ ವಾಲ್ಮೀಕಿ ನಾಯಕ ಸಂಘದ ತಾಲೂಕು ಘಟಕದ ಅಧ್ಯಕ್ಷ ಮರೆಪ್ಪ ಪ್ಯಾಟಿ ಶಿರವಾಳ, ಸೇನೆಯ ರಾಜ್ಯ ಘಟಕದ ಕಾರ್ಯದರ್ಶಿ ಮಹೇಶ ಭಂಗಿ, ಅಶೋಕ ಯಕ್ಷಿಂತಿ, ಮಲ್ಲಪ್ಪ ಅರಳಹಳ್ಳಿ, ಮಾನಶಪ್ಪ ನಾಗನಟಗಿ, ಅಂಬಲಯ್ಯ ನಾಗನಟಗಿ, ಆನಂದ ಹಳಿಸಗರ, ವರದ, ನಾಗರಾಜ, ಹಣಮಗೌಡ ಮರಕಲ್‌, ಬಾಲು, ಸುಭಾಷ, ತಿರುಪತಿ ಯಕ್ಷಿಂತಿ, ದೇವಪ್ಪ ಗಂಗನಾಳ, ಹಣಮಂತ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next